Advertisement

ಸಂಭ್ರಮದ ಅಯ್ಯಪ್ಪಸ್ವಾಮಿ ಮಹಾಪೂಜ

03:54 PM Jan 02, 2018 | |

ನಾರಾಯಣಪುರ: ಇಲ್ಲಿನ ಈಶ್ವರ ದೇವಸ್ಥಾನ ಆವರಣದಲ್ಲಿ ರವಿವಾರ ರಾತ್ರಿ ಮಾಲಾಧಾರಿ ಅಯ್ಯಪ್ಪ ಭಕ್ತರು ಅಯ್ಯಪ್ಪಸ್ವಾಮಿ ಮಹಾಪೂಜೆ ಕಾರ್ಯಕ್ರಮವನ್ನು ಭಕ್ತಿ ಭಾವದಿಂದ ನೆರವೇರಿಸಿದರು.

Advertisement

ಜ್ಯೋತಿ ಮೆರವಣಿಗೆ: ಇಲ್ಲಿನ ಗದ್ದೆಮ್ಮ ದೇವಿ ದೇವಸ್ಥಾನದಲ್ಲಿ ಗಿರಿಯಪ್ಪ ಗುರುಸ್ವಾಮಿಗಳ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸುವ ಮೂಲಕ ಜ್ಯೋತಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಜ್ಯೋತಿಯೊಂದಿಗೆ ಅಯ್ಯಪ್ಪನ ನಾಮಾವಳಿ ಸ್ತುತಿಸುತ್ತಾ ಇಲ್ಲಿನ ಬಜಾರ ಗಣೇಶ ದೇವಸ್ಥಾನಕ್ಕೆ ತೆರಳಿದ ಅಯ್ಯಪ್ಪ ಭಕ್ತರು ಅಲ್ಲಿನ ಗಣೇಶನಿಗೆ ಪೂಜೆ ಸಲ್ಲಿಸಿ, ಮಹರ್ಷಿ ವಾಲ್ಮೀಕಿ ವೃತದಲ್ಲಿ ಕರ್ಪೂರ ಬೆಳಗಿಸಿ ಅಲ್ಲಿಂದ ಯಲ್ಲಾಲಿಂಗ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು.

ಈಶ್ವರ ದೇವಸ್ಥಾನ ಆವರಣಕ್ಕೆ ಜ್ಯೋತಿ ಪ್ರವೇಶ ಪಡೆದ ನಂತರ ಮಹಾಪೂಜಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮುದ್ದೇಬಿಹಾಳ ಶಿವು ಗುರುಸ್ವಾಮಿಯವರ ಅಯ್ಯಪ್ಪಸ್ವಾಮಿ ಮೂರ್ತಿಗೆ ಅಭಿಷೇಕ, ಅಲಂಕಾರ ಸೇರಿದಂತೆ 18 ಮೆಟ್ಟಲುಗಳಿಗೆ ಕರ್ಪೂರ ಜ್ಯೋತಿ ಬೆಳಗಿಸಿ, ವಿಶೇಷ ಪೂಜೆ ನೆರವೇರಿಸುವ ಮೂಲಕ ಮಹಾಪೂಜೆ ಕಾರ್ಯಕ್ರಮ ನಡೆಸಿಕೊಟ್ಟರು.

ಮುದ್ದೇಬಿಹಾಳ, ಕೊಡೇಕಲ್‌, ರಾಜನಕೋಳುರ, ನಾಲತವಾಡ, ಮಿಣಜಗಿ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಅಯ್ಯಪ್ಪ ಭಕ್ತ ಮಾಲಾಧಾರಿಗಳು, ಸ್ಥಳೀಯ ಅಯ್ಯಪ್ಪ ಭಕ್ತರು, ಅಯ್ಯಪ್ಪನ ನಾಮಾವಳಿ ಸೇರಿದಂತೆ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿ ಭಕ್ತಿ ಮೆರದರು. ಇದೇ ಸಂದರ್ಭದಲ್ಲಿ ಮಹಾಪೂಜೆಯಲ್ಲಿ ಭಾಗವಹಿಸಿದ ಅಯ್ಯಪ್ಪ ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತು.

Advertisement

Udayavani is now on Telegram. Click here to join our channel and stay updated with the latest news.

Next