Advertisement

ಪೈಗಂಬರ್ ಜಯಂತಿ ದಿನದಂದು ಗಂಗಾಧರೇಶ್ವರನ ಪಲ್ಲಕ್ಕಿ ಹೊತ್ತು ಭಜನೆ ಮಾಡಿದ ಮಾಜಿ ಸಚಿವ ಅನ್ಸಾರಿ

09:39 AM Nov 11, 2019 | keerthan |

ಗಂಗಾವತಿ: ಪೈಗಂಬರ್ ಜಯಂತಿ ಮತ್ತು ಜಯನಗರದ ಶ್ರೀ ಗಂಗಾಧರೇಶ್ವರ ದೇಗುಲ ವಾರ್ಷಿಕೋತ್ಸವದ ಪಲ್ಲಕ್ಕಿ ಉತ್ಸವ ರವಿವಾರ ನಗರದಲ್ಲಿ ಜರುಗಿತು.

Advertisement

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗು ಅವರ ಬೆಂಬಲಿಗರು ಮೊದಲು ಗಂಗಾಧರೇಶ್ವರ ಪಲ್ಲಕ್ಕಿ ಉತ್ಸವಕ್ಕೆ ತೆರಳಿ ಪಲ್ಲಕ್ಕಿ ಹೊತ್ತು ಭಜನೆ ಮಾಡುವ ಮೂಲಕ ಭಾವೈಕ್ಯತೆ ಮೆರೆದರು. ನಂತರ ಪೀರ್ಜಾದ ಗಲ್ಲಿಯಲ್ಲಿ ಪ್ರವಾದಿ ಮಹಮದ್ ಪೈಗಂಬರ್ ಜಯಂತಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸರ್ವರಿಗೂ ಶುಭಕೋರಿದರು.

ಕಲ್ಮಠದ ಹತ್ತಿರ ಡಾ.ಕೊಟ್ಟರೂ ಮಹಾಸತವಾಮಿ‌ ನೇತೃತ್ವದಲ್ಲಿ ಮೆಕ್ಕೆಜೋಳ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಹಣ್ಣು ಮತ್ತು ತಂಪುಪಾನೀಯ ನೀಡಲಾಯಿತು. ಶಾಸಕ ಪರಣ್ಣಮುನವಳ್ಳಿ,ಎಚ್.ಆರ್.ಶ್ರೀ ನಾಥ,ಡಿವೈಎಸ್ ಪಿ ಡಾ.ಚಂದ್ರಶೇಖರ, ಜೋಗದ ನಾರಾಯಣಪ್ಪ,ಅಮರಜ್ಯೋತಿ ನರಸಪ್ಪ ಸೇರಿ‌ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next