Advertisement

ಇವಿಎಂ ಹ್ಯಾಕ್‌ ಮಾಡಿ ಗೆದ್ದರು: ಕೋಳಿವಾಡ

11:14 PM Dec 17, 2019 | Team Udayavani |

ಬೆಂಗಳೂರು: ಉಪ ಚುನಾವಣೆಯಲ್ಲಿ ಇವಿಎಂ ಹ್ಯಾಕ್‌ ಮಾಡಿ ಕಾಂಗ್ರೆಸ್‌ ಸ್ಪರ್ಧಿಗಳನ್ನು ಸೋಲಿಸಲಾಯಿತು ಎಂದು ರಾಣಿಬೆನ್ನೂರು ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ ಕೆ.ಬಿ.ಕೋಳಿವಾಡ ದೂರಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆಯಲ್ಲಿ ತನ್ನ ಪರ ಜನ ಇದ್ದರೂ ಬಿಜೆಪಿ ಪರ ಇವಿಎಂ ಇತ್ತು. ಸಿದ್ದರಾಮಯ್ಯ ಅವರ ಮನೆಯಲ್ಲಿ ಪರೀಕ್ಷೆ ಮಾಡಿದಾಗ ಇವಿಎಂ ಹ್ಯಾಕ್‌ ಖಚಿತವಾಗಿದೆ.

Advertisement

ಸಿದ್ದರಾಮಯ್ಯ ಅವರ ಮುಂದೆ ಎಂಜಿನಿಯರ್‌ ಒಬ್ಬರು ಇವಿಎಂನಲ್ಲಿ ಮತ ಚಲಾಯಿಸುವಂತೆ ಸೂಚಿಸಿದರು. ಸಿದ್ದರಾಮಯ್ಯ ಅವರು 10 ಮತ ಚಲಾಯಿಸಿದರು. ಅದರಲ್ಲಿ ಕಾಂಗ್ರೆಸ್‌ಗೆ ಎಷ್ಟು ಮತ ಬೇಕು ಎಂದು ಕೇಳಿದರು. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಏಳು, ಬಿಜೆಪಿಗೆ ಮೂರು ಮತ ಬೇಕು ಎಂದು ಹೇಳಿದರು. ಇವಿಎಂ ಓಪನ್‌ ಮಾಡಿದಾಗ ಸಿದ್ದರಾಮಯ್ಯ ಹೇಳಿದಷ್ಟೇ ಮತ ಬಂದಿದ್ದವು.

ಹೀಗಾಗಿ ಇವಿಎಂ ಹ್ಯಾಕ್‌ ಆಗಿರುವುದರಲ್ಲಿ ಅನುಮಾನವಿಲ್ಲ ಎಂದರು. ಸಿದ್ದರಾಮಯ್ಯ ಅವರು ಅದನ್ನೇ ಹೇಳಿದ್ದಾರೆ. ಇವಿಎಂ ಇರುವವರೆಗೂ ಬಿಜೆಪಿ ಬಿಟ್ಟು ಯಾವ ಪಕ್ಷವೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಇವಿಎಂ ಹ್ಯಾಕ್‌ ಮಾಡಿ ಚುನಾವಣೆ ಗೆಲ್ಲುತ್ತಾರೆ. ಯಡಿಯೂರಪ್ಪ ಅವರ ಸರ್ಕಾರ ಭದ್ರ ಮಾಡಲು ಇವಿಎಂ ಹ್ಯಾಕ್‌ ಮಾಡಿದ್ದರು ಎಂದು ಹೇಳಿದ್ದಾರೆಂದರು.

Advertisement

Udayavani is now on Telegram. Click here to join our channel and stay updated with the latest news.

Next