Advertisement

ಇವಿಎಂ ದುರ್ಬಳಕೆ: ಹೈಕೋರ್ಟ್‌ಗೆ ಮೊರೆ

07:20 AM Jul 01, 2018 | Team Udayavani |

ಬೆಂಗಳೂರು: ವಿದ್ಯುನ್ಮಾನ ಮತ ಯಂತ್ರ ದುರ್ಬಳಕೆ ಆರೋಪ ವಿಚಾರ ಇದೀಗ ಹೈಕೋರ್ಟ್‌ ಅಂಗಳ ತಲುಪಿದೆ.

Advertisement

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಾ. ವೇದವ್ಯಾಸ ಕಾಮತ್‌, ಮಂಗಳೂರು ಉತ್ತರ-ಡಾ. ಭರತ್‌ಶೆಟ್ಟಿ, ಮೈಸೂರು ಕೃಷ್ಣರಾಜ ಕ್ಷೇತ್ರ- ಎಸ್‌.ಎ ರಾಮದಾಸ್‌,ಚಾಮರಾಜ-ಎಲ್‌ ನಾಗೇಂದ್ರ, ಹು-ಧಾ ಕೇಂದ್ರ-ಜಗದೀಶ ಶೆಟ್ಟರ್‌, ತುಮಕೂರು ಗ್ರಾ-ಬಿ.ಸಿ.ಗೌರಿಶಂಕರ್‌, ಸಕಲೇಶಪುರ-ಎಚ್‌.ಕೆ.ಕುಮಾರಸ್ವಾಮಿ, ಜಗಳೂರು-
ಎಸ್‌.ವಿ.ರಾಮಚಂದ್ರ, ಕೆ.ಆರ್‌.ಪುರಂ-ಭೈರತಿ ಬಸವರಾಜ ಹಾಗೂ ನರಸಿಂಹರಾಜ ಕ್ಷೇತ್ರದ ತನ್ವೀರ್‌ ಸೇs… ಅವರ ಶಾಸಕ ಸ್ಥಾನ ಅಸಿಂಧುಗೊಳಿಸುವಂತೆ ಕೋರಿ ಪರಾಜಿತ ಅಭ್ಯರ್ಥಿಗಳು ಹೈಕೋರ್ಟ್‌ನಲ್ಲಿ ತಕರಾರು ಅರ್ಜಿಗಳನ್ನು ಸಲ್ಲಿಸಿದ್ದಾರೆ.

ತಮ್ಮ ಪ್ರತಿಸ್ಪರ್ಧಿ ಅಭ್ಯರ್ಥಿಗಳು ಇವಿಎಂ ಯಂತ್ರಗಳನ್ನು ದುರ್ಬಳಕೆ ಮಾಡಿಕೊಂಡು ಗೆಲುವು ಸಾಧಿಸಿದ್ದಾರೆ. ಹೀಗಾಗಿ ಅವರ ಶಾಸಕ ಸ್ಥಾನ ಅಸಿಂಧುಗೊಳಿಸುವಂತೆ ಅರ್ಜಿಯಲ್ಲಿ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next