Advertisement

“ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿಯೇ’

07:07 AM Jun 25, 2019 | Lakshmi GovindaRaj |

ಬೆಂಗಳೂರು: ಗ್ರಾಮ ವಾಸ್ತವ್ಯ ಕುರಿತು ಬಿಜೆಪಿ ಪುಸ್ತಕ ಬಿಡುಗಡೆ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ಕಾಮಾಲೆ ಇರೋರಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತದೆ ಎಂದು ಹೇಳಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಗ್ರಾಮ ವಾಸ್ತವ್ಯದ ಬಗ್ಗೆ ಹಳ್ಳಿ ಜನರನ್ನು ಕೇಳಿ, ಅವರೇ ಇದಕ್ಕೆಲ್ಲಾ ಕೌಂಟರ್‌ ನೀಡುತ್ತಾರೆ. ಇಲ್ಲಿ ಕುಳಿತು ಮಾತಾಡೋದು ಸರಿಯಲ್ಲ. ಜನರ ಹತ್ತಿರ ಮಾತನಾಡಿದರೆ ಗೊತ್ತಾಗುತ್ತದೆ ಎಂದು ತಿಳಿಸಿದರು.

ಮನ್ಸೂರ್‌ ಬಂದು ಹೇಳಲಿ: ಐಎಂಎ ಸಂಸ್ಥೆ ಮುಖ್ಯಸ್ಥ ಮನ್ಸೂರ್‌ ಜತೆ ಮುಖ್ಯಮಂತ್ರಿ ಕುಮಾರಸ್ವಾಮಿ ಊಟ ಮಾಡಿದ್ದಾರೆಂಬ ಬಿಜೆಪಿ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಆತನೇ ಬಂದು ಎಲ್ಲಾ ಹೇಳ್ತೀನಿ ಅಂತ ಹೇಳಿದ್ದಾನೆ. ಅವನು ಬಂದು ಹೇಳಲಿ, ಆತ ಬರೋದಕ್ಕೆ ಪರ್ಮಿಷನ್‌ ಕೊಟ್ಟಿದ್ದಾರೆ. ಯಾರ್ಯಾರ ಹೆಸರು ಹೇಳ್ತಾನೋ ನೋಡೋಣ. ಸಿಎಂ ತಗಂಡ್ರು, ಇನ್ನೊಬ್ಬರು ತಗಂಡ್ರು ಎಲ್ಲವೂ ಗೊತ್ತಾಗುತ್ತದೆಯಲ್ಲವೇ ಎಂದರು.

ಜೆಡಿಎಸ್‌ನ ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ ಹೆಸರು ಪ್ರಸ್ತಾಪ ಆಗಿರುವ ಬಗ್ಗೆ , ಯಾರ ಹೆಸರು ನಾನು ಪ್ರಶ್ನೆ ಮಾಡಲ್ಲ. ಒಳ್ಳೆ ಅಧಿಕಾರಿ ನೇಮಕ ಮಾಡಿ ತನಿಖೆ ಮಾಡಲಾಗುತ್ತಿದೆ. ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next