Advertisement

ಭಗವಂತನ ಸೇವೆಯಿಂದ ನಿತ್ಯ ಸುಖ : ಶ್ರೀ ವಿದ್ಯಾಸಾಗರ ತೀರ್ಥರು

09:22 PM Jun 17, 2019 | Sriram |

ಉಡುಪಿ: ಜ್ಞಾನ, ವಿದ್ಯೆ ಇದ್ದವನು ಭಗವದಾರಾಧನೆಯನ್ನೂ , ಧನಿಕನಾದವನು ಯಜ್ಞಯಾಗಾದಿಗಳನ್ನು ನಡೆಸಬೇಕು ಎಂದು ವೇದಗಳು ಆದೇಶಿಸುತ್ತವೆ. ದೇವರ ಸೇವೆಯನ್ನು ತಿಳಿದುಕೊಂಡು ಜ್ಞಾನಪೂರ್ವಕವಾಗಿ ಮಾಡುವುದರಿಂದ ಇಹದಲ್ಲಿ ಸುಖ ಪರದಲ್ಲಿ ಮೋಕ್ಷ ಪ್ರಾಪ್ತಿಯೂ ಸಾಧ್ಯ ಎಂದು ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ನುಡಿದರು.

Advertisement

ಮಲ್ಲಂಪಳ್ಳಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಸಮರ್ಪಣಾ ಪೂರ್ವಕ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ದೇವಳಕ್ಕೆ ಭೇಟಿ ನೀಡಿ ಅವರು ದೇವಳದ ವತಿಯಿಂದ ನೀಡಲಾದ ಗೌರವ ಸ್ವೀಕರಿಸಿ ಅನುಗ್ರಹ ಸಂದೇಶ ನೀಡಿದರು. ದೇವಳ ಉತ್ಸವ ಸಮಿತಿಯ ಪದಾಧಿಕಾರಿಗಳು ಶ್ರೀಗಳವರನ್ನು ಸತ್ಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next