Advertisement

ವರ್ಷವಾದರೂ ವಿತರಿಸಿಲ್ಲ ಮಣ್ಣು ಪರೀಕ್ಷೆ ಪ್ರಮಾಣ ಪತ್ರ

10:06 PM Apr 21, 2019 | Lakshmi GovindaRaju |

ಚನ್ನರಾಯಪಟ್ಟಣ: ತಾಲೂಕಿನಲ್ಲಿ 1.15 ಲಕ್ಷ ಮಂದಿ ರೈತರ ಕೃಷಿ ಭೂಮಿಯ ಮಣ್ಣು ಪರೀಕ್ಷೆ ಮಾಡಿ ಎರಡು ವರ್ಷ ಕಳೆದಿದ್ದರು ಮಣ್ಣು ಪರೀಕ್ಷೆಯ ಪ್ರಮಾಣ ಪತ್ರ ರೈತರ ಕೈ ಸೇರದೆ ಕೃಷಿ ಇಲಾಖೆ ಮತ್ತು ರೈತ ಸಂಪರ್ಕ ಕೇಂದ್ರದಲ್ಲಿ ಮಣ್ಣು ಮಣ್ಣು ಪಾಲಾಗುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಕೇಂದ್ರದ ಯೋಜನೆ ರಾಜ್ಯದಲ್ಲಿ ಮಣ್ಣು ಪಾಲು.

Advertisement

ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ಮೇಲೆ ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ, ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯ ಈ ಎರಡೂ ಕೇಂದ್ರದ ಸರ್ಕಾರದ ಇಲಾಖೆಗಳು ಹೆಚ್ಚು ಕಾರ್ಯಪ್ರವೃತ್ತರಾಗಿ ಕಿಸಾನ್‌ದಾರರ ಪಾಲಿಗೆ ವರವಾಗಿ ಪರಿಣಮಿಸಿವೆ.ರೈತರು ಅನಗತ್ಯವಾಗಿ ರಸಗೊಬ್ಬರ ಹಾಕುವ ಮೂಲಕ ಕೃಷಿ ಭೂಮಿಯನ್ನು ವಿಷವನ್ನಾಗಿ ಮಾಡುತ್ತಿರುವುದ ಗಮನಿಸಿದ ಮೋದಿ ಸರ್ಕಾರ ಕೃಷಿ ಭೂಮಿ ಮಣ್ಣು ಪರೀಕ್ಷೆಗೆ ಮುಂದಾಗಿತ್ತು.

ಮಣ್ಣು ಪರೀಕ್ಷೆ ಉಚಿತ: ಕೇಂದ್ರವು ಸಾವಿರಾರು ಕೋಟಿ ರೂ. ವೆಚ್ಚ ಮಾಡಿ ಕೃಷಿಕರ ಬಾಳಿಗೆ ಬೆಳಕಾಗುವ ಉದ್ದೇಶದಿಂದ ಸಂಪೂರ್ಣ ಉಚಿತವಾಗಿ ಕೃಷಿ ಭೂಮಿಯ ಮಣ್ಣನ್ನು ಪರೀಕ್ಷೆ ಮಾಡಿ ಅಗತ್ಯವಾಗಿರುವ ಜೈವಿಕ ಗೊಬ್ಬರವನ್ನು ವ್ಯವಸಾಯಕ್ಕೆ ಬಳಸಲು ಮಾರ್ಗದರ್ಶನ ನೀಡುವ ಉದ್ದೇಶದಿಂದ ರೈತರ ಮನೆ ಬಾಗಿಲಿಗೆ ಮಣ್ಣು ಪರೀಕ್ಷೆ ಪ್ರಮಾಣ ಪತ್ರವನ್ನು ನೀಡಲು ಮುಂದಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ: ಅಧಿಕಾರಿಗಳ ಸೋಮಾರಿತನ ಹಾಗೂ ರಾಜ್ಯ ಸರ್ಕಾರದ ಬೇಜವಾಬ್ದಾರಿ ಯಿಂದ ಕೇಂದ್ರ ಸರ್ಕಾರ ರೈತರಿಗಾಗಿ ಜಾರಿ ಮಾಡುವ ಯೋಜನೆಗಳು ಸಮರ್ಪಕವಾಗಿ ಕೃಷಿಕರಿಗೆ ತಲುಪುತ್ತಿಲ್ಲ. ಚುನಾವಣೆ ವೇಳೆ ಕೇಂದ್ರದ ಕಿಸಾನ್‌ ಸಮ್ಮಾನ್‌ ಯೋಜನೆ ಜಾರಿಯಾಗಿ ರೈತರ ಖಾತೆಗೆ ಹಣ ಜಮವಾದರೆ ತಮಗೆ ನಷ್ಟ ಎಂಬುದ ಮನಗಂಡಿರುವ ಮೈತ್ರಿ ಸರ್ಕಾರ ಮಂದಗತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ ಎನ್ನುವ ಮಾತುಗಳು ಬಿಜೆಪಿ ವಲಯದಿಂದ ಕೇಳಿ ಬರುತ್ತಿವಾಗಲೇ ಮಣ್ಣು ಪರೀಕ್ಷೆ ಪ್ರಮಾಣ ಪತ್ರವನ್ನು ಎರಡು ವರ್ಷದಿಂದ ರೈತರಿಗೆ ಯಾಕೆ ನೀಡಿಲ್ಲ ಎಂಬ ಪ್ರಶ್ನೆಗಳು ಉದ್ಬವಾಗುತ್ತಿವೆ.

ಪರೀಕ್ಷೆ ವಿವರ: ಮಣ್ಣು ಆರೋಗ್ಯ ಅಭಿಯಾನದಲ್ಲಿ ಕೃಷಿ ಭೂಮಿಯ ಫ‌ಲವತ್ತತೆಯನ್ನು ಪರೀಕ್ಷಿಸುವ ದೃಷ್ಟಿಯಿಂದ ತಾಲೂಕಿನ 25 ಎಕರೆ ಪ್ರದೇಶಕ್ಕೆ ಒಂದರಂತೆ 7,00 ಕಡೆ 1.98 ಲಕ್ಷ ಎಕರೆ ಕೃಷಿ ಭೂಮಿಯಲ್ಲಿ ಮಣ್ಣಿನ ಮಾದರಿ ಸಂಗ್ರಹಿಸಿ ಮಣ್ಣು ಪರೀಕ್ಷೆ ನಡೆಸಲಾಗಿದೆ. ಆದರೂ ಈ ವರರೆಗೂ ಮಣ್ಣು ಪರೀಕ್ಷೆ ಚೀಟಿ ರೈತರಿಗೆ ತಲುಪದೇ ಇರುವುದರಿಂದ ಅವೈಜ್ಞಾನಿಕವಾಗಿ ಕೃಷಿಗೆ ರಸಾಯನಿಕ ಗೊಬ್ಬರ ಬಳಕೆ ಮಾಡುತ್ತಿದ್ದಾರೆ.

Advertisement

ಆರು ಹೋಬಳಿಯಲ್ಲಿ ಅಭಿಯಾನ: ರೈತರು ಕೃಷಿಗೆ ಅನಗತ್ಯವಾಗಿ ರಾಸಾಯನಿಕ ಗೊಬ್ಬರ ಹಾಕುವುದನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಣ್ಣು ಪರೀಕ್ಷೆಗೆ ಮುಂದಾಗಿದ್ದು ಮಣ್ಣು ಆರೋಗ್ಯ ಅಭಿಯಾನದಿಂದ ತಾಲೂಕಿನ ಆರು ಹೋಬಳಿಯಲ್ಲಿ ಅಭಿಯಾನ ನಡೆಸಿ ಕೃಷಿಕರಿಗೆ ಜಾಗೃತಿ ಮೂಡಿಸಿದ್ದರು. ಪ್ರಮಾಣ ಪತ್ರ ಸಕಾಲಕ್ಕೆ ತಲುಪದೇ ಇರುವುದರಿಂದ ಯೋಜನೆ ಮಣ್ಣು ಪಾಲಾಗಿದೆ.

ಮುಂಗಾರು ಪ್ರಾರಂಭಕ್ಕೆ ಮುನ್ನ ನೀಡಿ: ಈಗಾಗಲೇ 2 ವರ್ಷದಿಂದ ಮಣ್ಣು ಪರೀಕ್ಷೆ ಚೀಟಿಯನ್ನು ರೈತರಿಗೆ ತಲುಪಿಲ್ಲ. ಈ ವರ್ಷ ಮುಂಗಾರು ಪ್ರಾರಂಭಕ್ಕೆ ಮುನ್ನವಾದರೂ ರೈತರ ಕೈ ತಲುಪಿದರೆ ಬೆಳೆಗಳಿಗೆ ಅಗತ್ಯವಿರುವವ ಗೊಬ್ಬರ ಹಾಕುಲು ರೈತರು ಮುಂದಾಗುತ್ತಾರೆ. ಇಲ್ಲವಾದಲ್ಲಿ ಕೃಷಿ ಔಷಧಿ ಅಂಗಡಿ ಹಾಗೂ ರಾಸಾಯನಿಕ ಗೊಬ್ಬರ ಮಾರಾಟಗಾರರ ಮಾತಿಗೆ ಮರುಳಾಗಿ ಅನವಶ್ಯಕವಾಗಿ ರಾಸಾಯನಿಕ ಗೊಬ್ಬರ ಹಾಗೂ ಔಷಧಿಯನ್ನು ಹೆಚ್ಚು ಸಿಂಪಡಿಸುತ್ತಾರೆ.

ಕೃಷಿ ಇಲಾಖೆಗೆ ಮಣ್ಣು ಪರೀಕ್ಷೆ ಚೀಟಿ ಕೇಂದ್ರದಿಂದ ಬಂದಿವೆ. ಅವುಗಳನ್ನು ಹೋಬಳಿವಾರು ಖಾತೆದಾರರ ಹೆಸರಿನಂತೆ ವಿಂಗಡಣೆ ಮಾಡಿ ರೈತ ಸಂಪರ್ಕ ಕೇಂದ್ರಕ್ಕೆ ನೀಡಲಾಗಿದೆ. ಅಲ್ಲಿಂದ ಹಳ್ಳಿಗಳಿಗೆ ತಲುಪಿಸಬೇಕು ತಲುಪದೆ ಇದ್ದರೆ ಕೂಡಲೇ ತಲುಪಿಸುವ ಕಾರ್ಯ ಮಾಡಲಾಗುತ್ತದೆ.
-ಗುರುಸಿದ್ದಪ್ಪ, ಸಹಾಯಕ ಕೃಷಿ ನಿರ್ದೇಶಕ.

* ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next