Advertisement

Aranthodu: ದುರಸ್ತಿ ನಿರ್ಣಯವಾದರೂ ಕೆಲಸ ಆಗಿಲ್ಲ!

04:21 PM Aug 12, 2024 | Team Udayavani |

ಅರಂತೋಡು: ಅಜ್ಜಾವರ ಗ್ರಾಮದ ಪಡ್ಡಂಬೈಲು ಕರ್ಲಪ್ಪಾಡಿ ಕುಡೆಂಬಿ ತೆರಳುವ ರಸ್ತೆಯು ತೀರ ಹದಗೆಟ್ಟಿದ್ದು ಈ ರಸ್ತೆಯ ಕುರಿತು ಉದಯವಾಣಿ ಸುದಿನ ವರದಿಯನ್ನು ಬಿತ್ತರಿಸುತ್ತು. ವರದಿ ಪ್ರಕಟವಾದ ಬೆನ್ನಲ್ಲೇ ಗ್ರಾಮ ಸಭೆಯಲ್ಲಿ ಭಾರಿ ಚರ್ಚೆ ನಡೆದು ಪಂಚಾಯತ್‌ ವತಿಯಿಂದ ತಾತ್ಕಾಲಿಕ ದುರಸ್ತಿಗೆ ನಿರ್ಣಯಿಸಲಾಗಿತ್ತು.

Advertisement

ಗ್ರಾಮ ಸಭೆ ಕಳೆದು ಸುಮಾರು ಎರಡು ವಾರ ಕಳೆದರು ಇನ್ನು ರಸ್ತೆಗೆ ತಾತ್ಕಾಲಿಕ ದುರಸ್ತಿ ಭಾಗ್ಯ ಕಾಣದೇ ಇದ್ದು ಮನೋರಮ ಎಂಬುವವರ ಮನೆಯ ಮುಂಭಾಗದಲ್ಲಿ ರಸ್ತೆ ಗದ್ದೆಯಂತಾಗಿದ್ದು ಚಕ್ರಗಳು ಹೂತುಹೋಗುತ್ತಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ತತ್‌ಕ್ಷಣ ಗ್ರಾಮ ಸಭೆಯಲ್ಲಿ ಒಪ್ಪಿಗೆ ಸೂಚಿಸಿ ನಿರ್ಣಯಿಸಿದಂತೆ ತಾತ್ಕಾಲಿಕ ದುರಸ್ತಿ ಪಡಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next