Advertisement

ಮಳೆ ಬಿದ್ದರೂ ದೆಹಲಿಗೆ ಸಿಗದು ನೆಮ್ಮದಿ

12:36 PM Nov 03, 2019 | Team Udayavani |

ಹೊಸದಿಲ್ಲಿ: ಅತ್ಯಂತ ಗಂಭೀರ ಪ್ರಮಾಣದಲ್ಲಿ ಹೊಸದಿಲ್ಲಿಯಲ್ಲಿ ಗಾಳಿಯ ಗುಣಮಟ್ಟ ಕುಸಿದಿರುವ ಪರಿಸ್ಥಿತಿ ಶನಿವಾರವೂ ಸುಧಾರಣೆಯಾಗಿಲ್ಲ. ನ.7-8ರ ವರೆಗೆ ಈ ಸ್ಥಿತಿ ಮುಂದುವರಿ ಯಲಿದೆ. ಇದರ ಜತೆಗೆ ಸದ್ಯದಲ್ಲೇ ಸ್ವಲ್ಪಮಟ್ಟಿಗೆ ದೆಹಲಿಯಲ್ಲಿ ಮಳೆ ಸುರಿಯಲಿದೆಯಾದರೂ ಪರಿಸ್ಥಿತಿ ಉತ್ತಮಗೊಳ್ಳುವ ಸಾಧ್ಯತೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

Advertisement

ಅಲ್ಲಲ್ಲಿ ಚದುರಿದಂತೆ ಮಳೆಯಾಗುವ ಸಾಧ್ಯತೆ ಇದೆಯಾದರೂ, ಧಾರಾಕಾರ ಮಳೆಯಾಗಲಾರದು. ನ.4ರಿಂದ ಪ್ರತಿ ಗಂಟೆಗೆ 10-20ಕಿಮೀ ವೇಗದಲ್ಲಿ ಗಾಳಿ ಬೀಸಲಿರುವುದರಿಂದ ಕೊಂಚ ಬದಲಾವಣೆಯಾಗುವ ಸಾಧ್ಯತೆ ಎಂದು ಐಎಂಡಿ ಮುನ್ಸೂಚನೆ ಹೇಳಿದೆ. ಪಂಜಾಬ್‌, ಹರ್ಯಾಣದಲ್ಲಿಯೂ ಗಾಳಿಯ ಗುಣಮಟ್ಟ ಅತ್ಯಂತ ಗಂಭೀರ ಸ್ಥಿತಿಯಿಂದ ಕೂಡಿದೆ. ಹೊಲಗಳಲ್ಲಿನ ಭತ್ತದ ಕಳೆಗಳಿಗೆ ಬೆಂಕಿ ಹಚ್ಚಿರುವುದರಿಂದ ಎದ್ದಿರುವ ಹೊಗೆ ಹೊಸದಿಲ್ಲಿ ಮಾತ್ರವಲ್ಲ ಪಂಜಾಬ್‌, ಹರ್ಯಾಣಗಳಿಗೂ ವ್ಯಾಪಿಸಿದೆ.

34 ಮಂದಿ ಬಂಧನ: ವಾಯು ಮಾಲಿನ್ಯ ಕೈಮೀರಿದ ಸ್ಥಿತಿ ಇರುವ ಹೊರತಾಗಿಯೂ ನಿರ್ಮಾಣ ಕಾರ್ಯ ನಡೆಸ ಬಾರದು ಎಂಬ ನಿಯಮ ಉಲ್ಲಂ ಸಿರುವ ಆರೋಪಕ್ಕೆ ಸಂಬಂಧಿಸಿದಂತೆ ನೋಯ್ಡಾ, ಗ್ರೇಟರ್‌ ನೋಯ್ಡಾಗಳಲ್ಲಿ ಕಂಪನಿಯೊಂದರ ನಿರ್ದೇಶಕ, ಮೂವರು ಎಂಜಿನಿಯರ್‌ಗಳು ಸೇರಿದಂತೆ 34 ಮಂದಿಯನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next