Advertisement

ಈಗ ಹಣ ಖರ್ಚು ಮಾಡದಿದ್ರೆ ಶ್ರೀರಾಮ ಕೂಡಾ ಚುನಾವಣೆ ಗೆಲ್ಲಲ್ಲ!

01:29 PM Sep 27, 2018 | Team Udayavani |

ಗೋವಾ: ದೇಶದ ಚುನಾವಣೆಯಲ್ಲಿ ಹಣದ ಮೂಲಕ ಅಧಿಕಾರವನ್ನು ಪಡೆಯಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಒಂದು ವೇಳೆ ಭಗವಂತ ಶ್ರೀರಾಮ ಕೂಡಾ ಚುನಾವಣೆಯಲ್ಲಿ ಸ್ಪರ್ಧಿಸಿ ಹಣ ಖರ್ಚು ಮಾಡದಿದ್ದರೆ ಗೆಲ್ಲವುದಿಲ್ಲ ಎಂದು ಗೋವಾ ಆರ್ ಎಸ್ ಎಸ್ ನ ಮಾಜಿ ಅಧ್ಯಕ್ಷ ಸುಭಾಶ್ ವೆಲಿಂಗ್ ಕಾರ್ ಅವರು ವ್ಯಂಗ್ಯವಾಡಿದ್ದಾರೆ.

Advertisement

ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಶ್ರೀರಾಮ ಕೂಡಾ ಹಣ ಖರ್ಚು ಮಾಡಿಯೇ ಚುನಾವಣೆಯಲ್ಲಿ ಗೆಲ್ಲಬೇಕಾಗಿದೆ ಎಂದರು. ಅವರು ಬುಧವಾರ ಪಣಜಿಯಲ್ಲಿ ಗೋವಾ ಸುರಕ್ಷಾ ಮಂಚ್ ನ ಯುವ ಸಮೂಹವನ್ನು ಉದ್ದೇಶಿಸಿ ಮಾತನಾಡಿದ್ದರು.

ಇತ್ತೀಚೆಗಿನ ಚುನಾವಣೆಗಳಲ್ಲಿ ರಾಜಕಾರಣಿಗಳು ಯುವಕರು ಮತ್ತು ಮಹಿಳೆಯರು ಎಂಬ ಎರಡು ವಿಧದ ವಿಭಾಗ ಮಾಡುವ ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ. ಮತ ಗಳಿಸಲು ಯುವ ಸಮೂಹ ಮತ್ತು ಮಹಿಳೆಯರನ್ನು ಗುರಿಯಾಗಿರಿಸಿ ಹಣದ ಹಾಗೂ ಇನ್ನಿತರ ಉಡುಗೊರೆಗಳ ಅಮಿಷವೊಡ್ಡುತ್ತಿದ್ದಾರೆ ಎಂದು ಆರೋಪಿಸಿದರು.

ಭಾರತೀಯ ಜನತಾ ಪಕ್ಷ ನೈತಿಕತೆಯನ್ನು ಕಳೆದುಕೊಂಡಿದ್ದು, ದೇಶದಲ್ಲಿ ಇತರ ರಾಜಕೀಯ ಪಕ್ಷಗಳು ಏನು ಮಾಡುತ್ತಿದ್ದವೋ ಅದನ್ನೇ ಬಿಜೆಪಿ ಕೂಡಾ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next