Advertisement

Moodbidri ಬಸ್ಸನ್ನೇ ಆಸ್ಪತ್ರೆಗೆ ಕೊಂಡೊಯ್ದರೂ ಹೃದ್ರೋಗಿಯ ಜೀವ ಉಳಿಸಲಾಗಲಿಲ್ಲ!

11:24 PM Aug 11, 2024 | Team Udayavani |

ಮೂಡುಬಿದಿರೆ: ಪ್ರಯಾಣಿಕರೊಬ್ಬರು ಹೃದಯಾಘಾತಕ್ಕೆ ಒಳಗಾದದ್ದನ್ನು ಗಮನಿಸಿದ ಬಸ್‌ ಸಿಬಂದಿ, ಬಸ್ಸನ್ನು ಆಸ್ಪತ್ರೆಗೆ ಒಯ್ದರೂ ಜೀವ ಉಳಿಸಲಾಗದ ಘಟನೆ ಶನಿವಾರ ಮೂಡುಬಿದಿರೆಯಲ್ಲಿ ನಡೆದಿದೆ.

Advertisement

ವೇಣೂರು ಕರಿಮಣೇಲು ನರಂಗೆ ನಿವಾಸಿ, ಕೃಷಿಕ ಸದಾನಂದ ಹೆಗ್ಡೆ (67) ಮಗಳ ಸೀಮಂತಕ್ಕೆ ಸಂಬಂಧಿಕರನ್ನು ಆಹ್ವಾನಿಸಲು ಮೂಡುಬಿದಿರೆಯಿಂದ ಕಾರ್ಕಳಕ್ಕೆ ಪತ್ನಿ ಜತೆ ತೆರಳುತ್ತಿದ್ದರು. ಬಸ್‌ ಹತ್ತಿ ಸ್ವಲ್ಪ ಸಮಯದಲ್ಲೇ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡು ಅಸ್ವಸ್ಥರಾದರು.

ಕೂಡಲೇ ನಿರ್ವಾಹಕ ನವೀನ್‌ ಅವರು ಚಾಲಕ ವಿಜಯ್‌ಗೆ ತಿಳಿಸಿದರು.

ಚಾಲಕ ಬಸ್ಸನ್ನು ಮೂಡುಬಿದಿರೆ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದರು. ಅಲ್ಲಿ ವೈದ್ಯರು ಪರೀಕ್ಷಿಸಿದಾಗ ಸದಾನಂದ ಮೃತಪಟ್ಟಿರುವುದು ತಿಳಿದು ಬಂತು. ಈಚೆಗೆ ಮಂಗಳೂರು, ಸುರತ್ಕಲ್‌, ಉಡುಪಿಯಲ್ಲೂ ಇಂಥದ್ದೇ ಪ್ರಕರಣಗಳು ಬಸ್ಸಿನಲ್ಲಿ ನಡೆದಿದ್ದು, ಇದು ಐದನೆಯ ಘಟನೆಯಾಗಿದೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next