Advertisement

ಆಧಾರ್‌ಗಾಗಿ ನಿತ್ಯ ಜಾಗರಣೆ

10:20 AM Jun 16, 2019 | Team Udayavani |

ಗುಳೇದಗುಡ್ಡ: ಒಂದೆಡೆ ಬುತ್ತಿ ಕಟ್ಟಿಕೊಂಡು ಬಂದು ಊಟ ಮಾಡುತ್ತಿರುವ ತಾಯಿ- ಮಕ್ಕಳು, ಇನ್ನೊಂದೆಡೆ ನನ್ನ ಪಾಳಿ ಯಾವಾಗ್‌ ಬರುತ್ರಿ ಅಂತಾ ಕೇಳ್ಳೋ ವೃದ್ಧರು, ಇದರ ಮಧ್ಯೆ ಆಗಾಗ ಕೈಕೊಡೋ ವಿದ್ಯುತ್‌, ಇನ್ನೇನು ವಿದ್ಯುತ್‌ ಬಂತು ಎನ್ನುವಷ್ಟರಲ್ಲೇ ಥಟ್ಟನೆ ಕೈ ಕೊಡುವ ಸರ್ವರ್‌.

Advertisement

ಇವೆಲ್ಲ ದೃಶ್ಯ ಕಂಡು ಬರುತ್ತಿರುವುದು ಗುಳೇದಗುಡ್ಡ ತಹಶೀಲ್ದಾರ್‌ ಕಚೇರಿಯಲ್ಲಿ. ಆಧಾರ್‌ ಕಾರ್ಡ್‌ ತಿದ್ದುಪಡಿಗಾಗಿ ಗುಳೇದಗುಡ್ಡ ಸೇರಿದಂತೆ ಪರ್ವತಿ, ಖಾನಾಪುರ, ಚಿಮ್ಮಲಗಿ, ಲಾಯದಗುಂದಿ, ಹಳದೂರ, ಮುರುಡಿ, ತೋಗುಣಶಿ, ಕೆಲವಡಿ, ತೆಗ್ಗಿ, ಲಿಂಗಾಪೂರ, ಪಾದನ ಕಟ್ಟಿ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳ ಜನರು ನಿತ್ಯವೂ ಪರದಾಡುವಂತಾಗಿದೆ.

•ಸರದಿ ಬರದೇ ನಿರಾಶೆಯಿಂದ ಮನೆಗೆ ಮರಳುವ ಸ್ಥಿತಿ

•ಬೆಳಿಗ್ಗೆ 4ಕ್ಕೆ ಬಂದು ನಿಲ್ತಾರೆ

ತಹಶೀಲ್ದಾರ್‌ ಕಚೇರಿಯಲ್ಲಿ ಒಮ್ಮೆ ವಿದ್ಯುತ್‌ ಕೈಕೊಟ್ಟರೆ, ಇನ್ನೊಮ್ಮೆ ನೆಟ್ವರ್ಕ್‌ ಸಮಸ್ಯೆಯಾಗುತ್ತದೆ. ಹೀಗಾಗಿ ದಿನವಿಡೀ ಕಾಯುವುದು ಬೇಸರವಾಗಿ ನಿತ್ಯ ಬೆಳಗಿನ ಜಾವ 4 ಗಂಟೆಯಿಂದಲೇ ಸರದಿಯಲ್ಲಿ ನಿಲ್ಲುವಂತಾಗಿದೆ. ಕೆಲವೊಮ್ಮೆ ಗಂಟೆಗಟ್ಟಲೇ ಕಾಯ್ದುರೂ ತಮ್ಮ ಸರದಿ ಬರದೇ ಕೊನೆಗೆ ಸಂಜೆ ವೇಳೆ ನಿರಾಶೆಯಿಂದ ಮನೆಗೆ ಹೋಗುವಂತಾಗಿದೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಯಾರೊಬ್ಬರು ಸಮಸ್ಯೆ ಬಗೆಹರಿಸುತ್ತಿಲ್ಲವಾಗಿದೆ ಎಂದು ಸಾರ್ಜಜನಿಕರು ದೂರಿದ್ದಾರೆ.

Advertisement

ಜನರೇಟರ್‌ ಸ್ಥಳಾಂತರ ಆಗಿಲ್ಲ: ವಿದ್ಯುತ್‌ ಕೈಕೊಟ್ಟರೆ ಜನರೇಟರ್‌ ಆದರೂ ಇರಬೇಕು. ಅದು ಹಳೇ ತಹಸೀಲ್ದಾರ್‌ ಕಚೇರಿ ಮುಂದಿದೆ. ಆದರೆ ಅದನ್ನು ಹೊಸ ತಹಸೀಲ್ದಾರ್‌ ಕಚೇರಿಗೆ ಸ್ಥಳಾಂತರ ಮಾಡಿಲ್ಲ. ಹೀಗಾಗಿ ಇಲ್ಲಿ ಕರೆಂಟ್ ಸಮಸ್ಯೆ ಕಾಡುತ್ತಿದೆ. ಕಚೇರಿ ಸ್ಥಳಾಂತರಗೊಂಡು ತಿಂಗಳುಗಳು ಕಳೆದರೂ ಜನರೇಟರ್‌ ಸ್ಥಳಾಂತರಿಸುವ ಕೆಲಸ ಆಗಿಲ್ಲವೆಂದು ಸಾರ್ವಜನಿಕರು ದೂರಿದ್ದಾರೆ.

ಬುತ್ತಿ ಕಟ್ಟಿಕೊಂಡು ಬರ್ತಾರೆ ಜನ: ಆಧಾರ್‌ ಕಾರ್ಡ್‌ ಮಾಡಿಸಲು ಗಂಟೆಗಟ್ಟಲೆ ಕಾಯುವ ಸ್ಥಿತಿ ಇರುವುದರಿಂದ ಸುತ್ತಮುತ್ತಲಿನ ಗ್ರಾಮಗಳ ಜನರು ಬುತ್ತಿ ಕಟ್ಟಿಕೊಂಡು ಬರುತ್ತಾರೆ, ಪಾಳೆ ಬಂದರೆ ಒಳಿತು ಇಲ್ಲವಾದರೆ ಕಟ್ಟಿಕೊಂಡು ಬಂದ ಬುತ್ತಿ ಬಿಚ್ಚಿಕೊಂಡು ಊಟ ಮಾಡಿ ಮತ್ತೇ ಪಾಳೆಗೆ ನಿಲ್ಲುತ್ತಾರೆ. ಇನ್ನು ಕೆಲವರು ಪಕ್ಕದ ಹೋಟೆಲ್ಗಳತ್ತ ಮುಖ ಮಾಡುತ್ತಾರೆ.

•ಮಲ್ಲಿಕಾರ್ಜುನ ಕಲಕೇರಿ

Advertisement

Udayavani is now on Telegram. Click here to join our channel and stay updated with the latest news.

Next