Advertisement
ಮಕ್ಕಳಲ್ಲಿನ ಅಂಗವೈಕಲ್ಯಗಳನ್ನು ಪತ್ತೆಹಚ್ಚಲು ಪೋಷಕರು ಹಲವು ವೈದ್ಯರನ್ನು ಸಂದರ್ಶಿಸಬೇಕಾಗುತ್ತದೆ ಮತ್ತು ಸೂಕ್ತ ಚಿಕಿತ್ಸೆ ಕೊಡಿಸಲು ಹಲವು ಕಡೆ ತೆರಳಬೇಕಾಗುತ್ತದೆ. ಮಕ್ಕಳ ತಜ್ಞರು, ಮೂಳೆ ತಜ್ಞರು, ಫಿಸಿಯೋಥೆರಪಿಸ್ಟ್, ಆಡಿಯೋಲಾಜಿಸ್ಟ್, ಮಾನಸಿಕ ತಜ್ಞರು, ಸ್ಪೆಶಲ್ ಎಜುಕೇಟರ್ ಮೊದಲಾದ ತಜ್ಞರು ಒಂದೆಡೆ ಇರುವ ಕೇಂದ್ರ ಇದಾಗಿದೆ. ಆದ್ದರಿಂದ ಜಿಲ್ಲಾಸ್ಪತ್ರೆ ಆವರಣದಲ್ಲಿ ಕೇಂದ್ರವನ್ನು ತೆರೆದರೆ ಹೆಚ್ಚು ಜನರಿಗೆ ಅನುಕೂಲವಾಗುತ್ತದೆ. ಇಲ್ಲವಾದರೆ ಸಮೀಪದಲ್ಲಿಯಾದರೂ ಜಾಗ ಗುರುತಿಸಲು ತಿಳಿಸಿದ್ದೇನೆ. ಕಟ್ಟಡ ಕಟ್ಟುವವರೆಗೆ ಕಾಯದೆ ಇರುವ ಕಟ್ಟಡದಲ್ಲಿ ಆರಂಭಿಸಲು ತಿಳಿಸಿದ್ದೇನೆ ಎಂದರು.
ಜಿಲ್ಲೆಯಲ್ಲಿ ಸುಮಾರು 16,000 ಅಂಗವಿಕಲರಿದ್ದಾರೆ. ಗುರುತಿಸದವರು ಸೇರಿದಂತೆ ಒಟ್ಟು ಸಂಖ್ಯೆ 25,000 ಆಗಬಹುದು. ಅವರಿಗೆ ಪುನರ್ವಸತಿ ಆಗಬೇಕಾಗಿದೆ. ವಿಶೇಷವಾಗಿ ಅಂಗವಿಕಲರಿಗೆ ಗುಣ ಮಟ್ಟದ ಶಿಕ್ಷಣ ದೊರಕಬೇಕು. ವಿಶೇಷ ಶಾಲೆಗಳು ಕಡಿಮೆಯಾಗಿ ಸಾಮಾನ್ಯ ಶಾಲೆಗಳಲ್ಲಿ ಕಲಿಯುವಂತಾದರೆ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು.
Related Articles
Advertisement
ಅಂಗವಿಕಲರು ಸರಿಯಾದ ಶಬ್ದವಿಕಲಾಂಗರು, ದಿವ್ಯಾಂಗರು, ವಿಶೇಷ ಚೇತನರು ಹೀಗೆ ವಿವಿಧ ಶಬ್ದಗಳನ್ನು ಬರೆಯಲಾಗುತ್ತಿದೆ. ಆದರೆ ಕಾಯಿದೆ ಪ್ರಕಾರ ಅಂಗವಿಕಲರು ಎಂಬುದೇ ಸರಿಯಾದ ಶಬ್ದ. ಇಲಾಖೆಯವರಿಗೂ ಅಂಗವಿಕಲರ ಸಬಲೀಕರಣ ಇಲಾಖೆ ಎಂದು ಬದಲಾಯಿಸಲು ಸೂಚಿಸಿದ್ದೇನೆ. ರಾಜ್ಯ ಮತ್ತು ರಾಷ್ಟ್ರದ ಇಲಾಖೆಗಳಿಗೂ ತಿಳಿಸುತ್ತೇವೆ. ಇತರ ಯಾವುದೇ ಶಬ್ದಗಳನ್ನು ಬರೆದರೂ ಉದ್ದೇಶ “ಡೈಲ್ಯೂಟ್’ ಆಗುತ್ತದೆ. ಬುದ್ಧಿಮಾಂದ್ಯರು ಎನ್ನುವುದು ಅಂಗವೈಕಲ್ಯದ ಒಂದು ವಿಧ. ಹೀಗೆ ಒಟ್ಟು 21 ಬಗೆ ಇದೆ. ಇವರನ್ನು “ಮಂದಬುದ್ಧಿಯವರು’ ಎಂದು ಕರೆಯುವಂತಿಲ್ಲ.
– ಬಸವರಾಜ್