Advertisement

ಮಂತ್ರಾಲಯದಲ್ಲಿ ಶೀಘ್ರ 33 ಅಡಿ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ

04:10 PM Apr 05, 2018 | Team Udayavani |

ರಾಯಚೂರು: ಮಂತ್ರಾಲಯದ ಹೊರವಲಯದಲ್ಲಿ ಪ್ರತಿಷ್ಠಾಪಿಸಲು ನಿರ್ಮಿಸಿದ 33 ಅಡಿ ಎತ್ತರದ ಏಕಶಿಲಾ ಅಭಯಾಂಜನೇಯ ಮೂರ್ತಿಗೆ ಮಂತ್ರಾಲಯದಲ್ಲಿ ಬುಧವಾರ ಅದ್ದೂರಿ ಸ್ವಾಗತ ದೊರಕಿತು.

Advertisement

ಶ್ರೀಮಠದ ಗೋಶಾಲಾ ಬಳಿಯಿರುವ ಒಂದು ಎಕರೆ ಪ್ರದೇಶದಲ್ಲಿ ಈ ಏಕಶಿಲಾ ಮೂರ್ತಿಯನ್ನು ಪ್ರತಿಷ್ಠಾಪಿಸುವ ಉದ್ದೇಶ ಹೊಂದಿದ್ದು, ಕಳೆದ ಆರು ತಿಂಗಳಿಂದ ಕೆತ್ತನೆ ಕಾರ್ಯ ಆರಂಭಿಸಲಾಗಿತ್ತು. ಬೆಂಗಳೂರಿನ ಕೃಷ್ಣಮೂರ್ತಿ ಎನ್ನುವ ಉದ್ಯಮಿ ಮೂರ್ತಿ ದಾನ ನೀಡಿದ್ದಾರೆ. ಬಿಡದಿ ಸಮೀಪದ ಶಿಲ್ಪಾಕಲಾ ಕೇಂದ್ರದಲ್ಲಿ ಮೈಸೂರು ಮೂಲದ ಅಶೋಕ ಗುಡಿಹಾರ ನೇತೃತ್ವದಲ್ಲಿ 10 ಜನ ಶಿಲ್ಪಿಗಳು ಮೂರ್ತಿ ಕೆತ್ತನೆ ಮಾಡಿದ್ದಾರೆ. 90 ಟನ್‌ಗೂ ಅಧಿಕ ಭಾರದ ಮೂರ್ತಿಯನ್ನು 88 ಚಕ್ರಗಳ ಬೃಹದಾಕಾರದ ಲಾರಿಯಲ್ಲಿ ತರಲಾಗಿದೆ.

ಈ ವೇಳೆ ಆಶೀರ್ವಚನ ನೀಡಿದ ಶ್ರೀಮಠದ ಪೀಠಾ ಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ಮಂತ್ರಾಲಯ ಬೃಹದಾಕಾರದಲ್ಲಿ ಬೆಳೆಯುತ್ತಿದೆ. ಈ ಅಭಯಾಂಜನೇಯ ಮೂರ್ತಿಯನ್ನು ಗೋಶಾಲೆ ಬಳಿ ಪ್ರತಿಷ್ಠಾಪಿಸಲಾಗುವುದು. ಅದೊಂದು ಧಾರ್ಮಿಕ ಕೇಂದ್ರವಾಗುವ ವಿಶ್ವಾಸವಿದೆ. ಮಂತ್ರಾಲಯಕ್ಕೆ ಬರುವ ಭಕ್ತರಿಗೆ ಅದೊಂದು ಪ್ರೇಕ್ಷಣೀಯ ಸ್ಥಳವಾಗಲಿದೆ. ಅಲ್ಲಿ ಲ್ಯಾಂಡ್‌ ಸ್ಕೇಪ್‌ ನಿರ್ಮಿಸಿ, ಸುತ್ತಲೂ ನೀರಿನ ಕೊಳ ನಿರ್ಮಿಸುವ ಉದ್ದೇಶವಿದೆ. ಶೀಘ್ರದಲ್ಲೇ ಮೂರ್ತಿ ಪ್ರತಿಷ್ಠಾಪನೆ ಸಮಾರಂಭ ಹಮ್ಮಿಕೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next