Advertisement

ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಸ್ಥಾನ ಎಂಬುದು ಮೂರ್ಖತನದ ಹೇಳಿಕೆ : ಈಶ್ವರಪ್ಪ

01:48 PM Jun 24, 2021 | Team Udayavani |

ಶಿವಮೊಗ್ಗ :  ಇವತ್ತು ಕಾಂಗ್ರೆಸ್ ನಲ್ಲಿ ಏನ್ ನಡೀತಾ ಇದೆ ಅವರಿಗೆ ಗೊತ್ತಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಅಂತಾ ಜಮೀರ್ ಅಹಮದ್ ಹೇಳಿದ್ರು ಅದನ್ನು ಡಿ.ಕೆ.ಶಿವಕುಮಾರ್ ಒಪ್ಪಲ್ಲ. ಇದು ಅವರ ಪಕ್ಷದ ವ್ಯವಸ್ಥೆ ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ‌ ನೀಡಿದ್ದಾರೆ.

Advertisement

ಪರಮೇಶ್ವರ್, ರಾಮಲಿಂಗಾರೆಡ್ಡಿ ಕೂಡ ನಾಯಕತ್ವದ ಬಗ್ಗೆ ನಿರ್ಧಾರ ಮಾಡಿಲ್ಲ ಎಂದು ಹೇಳಿಕೆ ನೀಡಿದ್ರು. ಈ ನಡುವೆ ಸಿದ್ದರಾಮಯ್ಯ ಅವರು ಹೇಳಿಕೆ ನೀಡೋಕೆ ನಾನು ಹೇಳಿಕೊಟ್ಟಿಲ್ಲ ಅಂದ್ರು. ಒಂದು ಕಡೆ ಯಾರು ಹೇಳಿಕೆ ಕೊಡಬೇಡಿ ಎಂದ್ರೇ, ಸಿದ್ದರಾಮಯ್ಯ ನಾನು ಹೇಳಿ ಕೊಟ್ಟಿಲ್ಲ ಅಂತಾರೇ.

ಚುನಾವಣೆ ಇನ್ನೂ ಎರಡು ವರ್ಷ ಇದೆ. ಈಗಲೇ ಕನಸು ಕಾಣುತ್ತಿದ್ದಾರೆ. ಕತ್ತಲೆ ಕೋಣೆಯಲ್ಲಿ ಇಲ್ಲದ ಕರಿಬೆಕ್ಕನ್ನು ಕಾಂಗ್ರೆಸ್ ನಾಯಕರು ಹುಡುಕುತ್ತಿದ್ದಾರೆ. ಸಿದ್ದರಾಮಯ್ಯ ನವರಿಗೆ ಮುಖ್ಯಮಂತ್ರಿ ಸ್ಥಾನ ಎಂದು ಮೂರ್ಖತನದ ಹೇಳಿಕೆ ನೀಡುತ್ತಿದ್ದಾರೆ. ಸಿಎಂ ಸ್ಥಾನ ಏನು ಅವರ ಜೇಬಲ್ಲಿ ಇದೆಯೇ…? ಅವರಿಗೊಂದು, ಇವರಿಗೊಂದು ಕೊಡೋಕೆ.

ರಾಜ್ಯದ ಜನ ತಿರಸ್ಕಾರ ಮಾಡಿ, ಸರ್ಕಾರವನ್ನೇ ಕೆಡವಿದ್ದಾರೆ. ಅದರೂ ಬುದ್ದಿ ಬಂದಿಲ್ಲ. ಯಾವುದೇ ಹೇಳಿಕೆ ಕೊಟ್ಟರೂ ಅವರಿಗೆ ಹೇಳೋರಿಲ್ಲ ಕೇಳೋರಿಲ್ಲ ಎಂದು ಈಶ್ವರಪ್ಪ ಟೀಕೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next