Advertisement

K. S. Eshwarappa ಬಿಜೆಪಿ ಡಮ್ಮಿ ಕ್ಯಾಂಡಿಡೇಟ್‌: ಆಯನೂರು ಮಂಜುನಾಥ್‌

06:41 PM Mar 24, 2024 | Shreeram Nayak |

ಶಿವಮೊಗ್ಗ:ಈಶ್ವರಪ್ಪ ಬಿಜೆಪಿ ಡಮ್ಮಿ ಕ್ಯಾಂಡಿಡೇಟ್‌ ಆಗಿ ಸ್ಪರ್ಧೆ ಮಾಡುತ್ತಿದ್ದಾರೆ. ಅವರದ್ದು ಹುಸಿ ಬಂಡಾಯ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್‌ ಟೀಕಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಬಿಜೆಪಿಯ ಹೊಂದಾಣಿಕೆಯ ಡಮ್ಮಿ ಕ್ಯಾಂಡಿಡೇಟ್‌. ಹಿಂದುಳಿದವರ ಮತ ಒಡೆಯಲು ಬಿಜೆಪಿ ಪ್ಲ್ಯಾನ್ ಮಾಡಿದ್ದು ಇದಕ್ಕಾಗಿ ಅವರಿಗೆ ಗವರ್ನರ್‌, ಮಗನಿಗೆ ಎಂಎಲ್‌ಸಿ ಆಫರ್‌ ನೀಡಲಾಗಿದೆ.

ಬಿಜೆಪಿಯವರು ಇಡಿ ಬೆದರಿಕೆಯ ಶೂಲವನ್ನು ಈಶ್ವರಪ್ಪ ಹಿಂದೆ ಇಟ್ಟಿದ್ದಾರೆ. 40 ಪರ್ಸೆಂಟ್‌ ವಿಚಾರದಲ್ಲಿ ದಾಳಿ ಮಾಡುವ ಭಯ ಇದೆ. ಈಶ್ವರಪ್ಪ ಬ್ಯಾಟರಿ ಅಷ್ಟು ಗಟ್ಟಿ ಇಲ್ಲ. ಹೊರಗಡೆ ಹಲಾಲ್‌, ಜಟ್ಕಾ ಬಗ್ಗೆ ಮಾತನಾಡಿದ ಅವರು ನಂತರ ಮುಸ್ಲಿಮರ ಮನೆಗೆ ಹೋಗಿ ಊಟ ಮಾಡಿದ್ದಾರೆ. ದೇವಸ್ಥಾನಗಳಿಗೆ ಸ್ವಲ್ಪ ದುಡ್ಡು ಕೊಟ್ಟು ಹೋಮ-ಹವನ ಮಾಡಿಸಿದ್ದಾರೆ. ಹರ್ಷ ಟ್ರಸ್ಟ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಕಾಂತೇಶ್‌. ಹಿಂದುತ್ವದ ಹೋರಾಟಕ್ಕೆ ಈಶ್ವರಪ್ಪ ಕೊಡುಗೆ ಏನೂ ಇಲ್ಲ. ಈ ಮನುಷ್ಯ ಗವರ್ನರ್‌ ಆದರೆ ಸಂವಿಧಾನಕ್ಕೆ ಅಪಾಯ ಬರುತ್ತದೆ. ಈಶ್ವರಪ್ಪ-ಯಡಿಯೂರಪ್ಪ ಕುಟುಂಬದ ಆಂತರಿಕ ಒಪ್ಪಂದ ಆಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next