Advertisement

ಕನ್ನಡ ಕಟ್ಟುವವರಿಗೆ ಸದಾ ಬೆಂಬಲ: ಈಶ್ವರ ಖಂಡ್ರೆ

04:21 PM Nov 16, 2021 | Team Udayavani |

ಭಾಲ್ಕಿ; ಜಿಲ್ಲೆಯಲ್ಲಿ ನಿಸ್ವಾರ್ಥ ಮನೋಭಾವದಿಂದ ಕನ್ನಡ ಉಳಿಸಿ-ಬೆಳೆಸುವವರಿಗೆ ಸದಾ ಬೆಂಬಲಿಸುವುದಾಗಿ ಶಾಸಕ ಈಶ್ವರ ಖಂಡ್ರೆ ಹೇಳಿದರು.

Advertisement

ಪಟ್ಟಣದ ಶಾಸಕರ ನಿವಾಸದಲ್ಲಿ, ಜಿಲ್ಲಾ ಕಸಾಪ ಸ್ಥಾನದ ಅಭ್ಯರ್ಥಿ ಸುರೇಶ್‌ ಚನಶೆಟ್ಟಿ ಅವರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸುರೇಶ್‌ ಚನಶೆಟ್ಟಿ ತಮ್ಮ ಅಧಿ ಕಾರವಧಿಯಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಜಿಲ್ಲೆಯಲ್ಲಿ ಕನ್ನಡದ ಚಟುವಟಿಕೆಗಳಿಗೆ ಚುರುಕು ಮುಟ್ಟಿಸಿದ್ದಾರೆ. ತಾಲೂಕು, ಜಿಲ್ಲಾಮಟ್ಟದ ಸಮ್ಮೇಳನ, ಪುಸ್ತಕ ಪ್ರಕಟಣೆ, ಸಾಹಿತಿಗಳಿಗೆ ಪ್ರೋತ್ಸಾಹ, ಕನ್ನಡ ಭವನ ನಿರ್ಮಾಣಕ್ಕೆ ಚಾಲನೆ ಸೇರಿ ಹಲವು ಅತ್ಯುತ್ತಮ ಕಾರ್ಯ ಮಾಡಿದ್ದಾರೆ ಎಂದ ಅವರು, ಚುನಾವಣೆಯಲ್ಲಿ ಕನ್ನಡದ ಸೇವೆ ಮಾಡುವವರಿಗೆ ಸದಾ ಬೆಂಬಲ ನೀಡುವುದಾಗಿ ತಿಳಿಸಿದರು.

ಜಿಲ್ಲಾ ಕಸಾಪದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸುರೇಶ್‌ ಚನಶೆಟ್ಟಿ ಮಾತನಾಡಿ, ನ.21ರಂದು ನಡೆಯಲಿರುವ ಕಸಾಪದ ಚುನಾವಣೆ ಯಲ್ಲಿ ಮತ್ತೂಂದು ಅವ ಧಿಗೆ ಆಶೀರ್ವದಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.

ಈ ವೇಳೆ ತಾಲೂಕು ಕಸಾಪದ ಹಾಲಿ ಅಧ್ಯಕ್ಷ ಶಶಿಧರ ಕೋಸಂಬೆ, ಕಾಶಿನಾಥ ಲದ್ದೆ, ಸಂಗಮೇಶ ಮದಕಟ್ಟಿ, ಸಂತೋಷ ಬಿಜಿ ಪಾಟೀಲ್‌, ಮಲ್ಲಿಕಾರ್ಜುನ ಹಲ್ಮಂಡಗೆ, ರಾಜಪ್ಪ ಪಾಟೀಲ್‌, ಸೂರ್ಯಕಾಂತ ಸುಂಟೆ, ರಾಜಕುಮಾರ ಬಿರಾದಾರ್‌, ಶರಣಪ್ಪ ಬಿರಾದಾರ್‌, ನಾಗಭೂಷಣ ಮಾಮಡಿ, ವಿಜಯಕುಮಾರ ಪರ್ಮಾ, ಅಶೋಕ ಕುಂಬಾರ, ಮಲ್ಲಿಕಾರ್ಜುನ ಪಾಟೀಲ್‌, ಸಂತೋಷ ವಾಡೆ, ಹಣಮಂತ ಕಾರಾಮುಂಗೆ, ಪ್ರಭು ಡಿಗ್ಗೆ, ಸಂಜು ಪ್ರಭಾ, ಬಸವರಾಜ ಬಲ್ಲೂರ, ಟಿ.ಎಂ. ಮಚ್ಚೆ, ರಮೇಶ ಬಿರಾದಾರ, ಮಹೇಶ ಮಂಗಲಗಿ, ಸುರೇಶ ಕುಡತೆ, ರವಿ ಬೋರವೆಲ್ಸ್‌ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next