Advertisement

Bidar: ನಮಗೆ ರಾಮ- ರಹೀಮ್ ಎಲ್ಲರೂ ಒಂದೇ… : ಸಚಿವ ಈಶ್ವರ ಖಂಡ್ರೆ

06:39 PM Jul 10, 2024 | Team Udayavani |

ಬೀದರ್: ನಮಗೆ ರಾಮ- ರಹೀಮ್ ಎಲ್ಲರೂ ಒಂದೇ ನಮ್ಮ ಸರ್ಕಾರದಲ್ಲಿ ಅಂಥ ಯಾವುದೇ ಭಾವನೆ ಇಲ್ಲ ಎಂದು ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಕುರಿತು ಜೆಡಿಎಸ್‌-ಬಿಜೆಪಿ ಮಾಡಿರುವ ಆರೋಪಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ರಾಮನಗರ ಜಿಲ್ಲೆ ಬದಲಾವಣೆ ತೀರ್ಮಾನವನ್ನು ಸಿಎಂ- ಡಿಸಿಎಂ ಮಾಡಲಿದ್ದಾರೆ. ಆದರೆ, ರಾಮನಗರ ಹೆಸರಿನಲ್ಲಿ ರಾಮ ಇದೆ ಎಂಬ ಕಾರಣಕ್ಕೆ ಬದಲಾವಣೆ ಮಾಡಲಾಗುತ್ತಿದೆ ಎಂಬ ಬಿಜೆಪಿಯವರ ಆರೋಪ ತಪ್ಪು. ಜಾತಿ ಜಾತಿಗಳಲ್ಲಿ ಒಡೆದಾಳುವ ಕೆಲಸ ಬಿಜೆಪಿ ಮಾಡುತ್ತಿದೆ. ನಮ್ಮ ಸರ್ಕಾರದಲ್ಲಿ ಅಂಥ ಯಾವುದೇ ಭಾವನೆ ಇಲ್ಲ. ನಮಗೆ ರಾಮ- ರಹೀಮ್ ಎಲ್ಲರೂ ಒಂದೇ ಎಂದು ನಡೆದುಕೊಳ್ಳುತ್ತೇವೆ ಎಂದರು.

ವಾಲ್ಮೀಕಿ ನಿಗಮದಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತಂಡ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದು, ಸರ್ಕಾರ ಅಕ್ರಮ ಹಣ ವಸೂಲಿ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡಲಿದೆ ಎಂದು ಹೇಳಿದರು.

ಅಕ್ರಮದ ತನಿಖೆಯನ್ನು ಎಸ್‌ಐಟಿ ತಂಡ ನಿಷ್ಪಕ್ಷಪಾತವಾಗಿ ಮಾಡಿದೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ವಿಪಕ್ಷಗಳ ಆಗ್ರಹ ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Mudhol ಮಕ್ಕಳ ಸುರಕ್ಷತೆ ಮರೆತ ಶಿಕ್ಷಣ ಸಂಸ್ಥೆಗಳು; ಕಣ್ಮುಚ್ಚಿ ಕುಳಿತ ಅಧಿಕಾರಿ ವರ್ಗ

Advertisement
Advertisement

Udayavani is now on Telegram. Click here to join our channel and stay updated with the latest news.

Next