Advertisement

ಎರ್ಲಪಾಡಿ  ಕ್ರಷರ್‌ಗೆ ದಾಳಿ: ಇಬ್ಬರು ವಶಕ್ಕೆ

01:00 AM Mar 22, 2019 | Harsha Rao |

ಕಾರ್ಕಳ: ಎರ್ಲಪಾಡಿ ಗ್ರಾಮದ ಶ್ರೀ ಮಹಾಗಣಪತಿ ಸ್ಟೋನ್‌ ಕ್ರಷರ್‌ ಕೋರೆಯಲ್ಲಿ ಅಕ್ರಮವಾಗಿ ಸ್ಫೋಟಕ ವಸ್ತು ದಾಸ್ತಾನಿರಿಸಿದ್ದ ಹಿನ್ನೆಲೆಯಲ್ಲಿ ಕಾರ್ಕಳ ಉಪವಿಭಾಗದ ಎಎಸ್‌ಪಿ ಕೃಷ್ಣಕಾಂತ್‌ ನೇತೃತ್ವದಲ್ಲಿ ಮಾ. 20ರಂದು ದಾಳಿ ನಡೆದಿದ್ದು, ಭಾರೀ ಪ್ರಮಾಣದ ಸ್ಫೋಟಕವನ್ನು ವಶಕ್ಕೆ ಪಡೆಯಲಾಗಿದೆ.

Advertisement

ಸ್ಥಳದಿಂದ 106 ಜಿಲೆಟಿನ್‌ ಕಡ್ಡಿ, 12 ಎಕ್ಸ್‌ಪ್ಲೋಸಿವ್‌ ಡಿಟೊನೇಟರ್‌, 8 ಲಾರಿ, 2 ಕಂಪ್ರಶರ್‌, 2 ಹಿಟಾಚಿ, 5 ಗ್ಯಾಸ್‌ ಸಿಲಿಂಡರ್‌, ಆರು ಮೋಟಾರ್‌ ಸೈಕಲ್‌ಗ‌ಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ನವಾಜ್‌ ಹಾಗೂ ಬೈಜು ಅವರನ್ನು ಬಂಧಿಸಲಾಗಿದೆ.

ಘಟನೆ ಸಂಬಂಧಿಸಿ ಕ್ರಷರ್‌ ಮಾಲಕ ರಾಮಕೃಷ್ಣ ಶೆಟ್ಟಿ, ಕೇರಳ ಮೂಲದ ಬೈಜು ಹಾಗೂ ಹಫೀಜ್‌, ಉಪ್ಪಿನಂಗಡಿ ಕೆರೆಮೂಲೆಯ ನವಾಜ್‌, ಸುರೇಶ್‌, ಪಕ್ರೇಶ್‌, ಜುನೈದ್‌ ಸಾಲ್ಮರ ವಿರುದ್ಧ ಪ್ರಕರಣ ದಾಖಲಾಗಿದೆ.

ಭಾರೀ ಪ್ರಮಾಣದ ಸ್ಫೋಟಕ ಬಳಸಿ ಪ್ರತಿದಿನ ಕರಿಕಲ್ಲುಗಳನ್ನು ಒಡೆಯಲಾಗುತ್ತಿದ್ದು, ಪರಿಸರದಲ್ಲಿ ಭೂ ಕಂಪನದ ಅನುಭವವಾಗುತ್ತಿತ್ತು ಎಂಬ ದೂರುಗಳು ಕೇಳಿಬರುತ್ತಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next