Advertisement

ಹುಬ್ಬಳ್ಳಿ: ಎರಡು ಕಡೆ ಚೂರಿ ಇರಿತ ಪ್ರಕರಣ, ಆರೋಪಿಗಳಿಗಾಗಿ ಶೋಧ

12:28 PM Nov 03, 2020 | keerthan |

ಹುಬ್ಬಳ್ಳಿ: ನಗರದಲ್ಲಿ ಸೋಮವಾರ ರಾತ್ರಿ ಎರಡು ಕಡೆ ಚೂರಿ ಇರಿತ ಪ್ರಕರಣಗಳು ನಡೆದಿವೆ.

Advertisement

ಭವಾನಿನಗರ ಬಳಿಯ ಮಾಧವ ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಸಹೋದರಿಬ್ಬರು ತಮ್ಮ ಪಕ್ಕದ ಮನೆಯ ನಿವಾಸಿ ರಮೇಶ ಕಟ್ಟಿಮನಿ ಎನ್ನುವವರನ್ನು   ಚಾಕುವಿನಿಂದ ಇರಿದಿದ್ದಾರೆ. ಗಾಯಾಳು ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆದು ಬಿಡುಗಡೆ ಆಗಿದ್ದಾನೆ. ಘಟನೆಗೆ ಸಂಬಂಧಿಸಿ ಅಶೋಕನಗರ ಪೊಲೀಸರು ವಿನಾಯಕ ನರಗುಂದನನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಮಂಜುನಾಥ ನರಗುಂದ ತಲೆಮರೆಸಿ ಕೊಂಡಿದ್ದಾನೆ.

ಇನ್ನೊಂದು ಪ್ರಕರಣದಲ್ಲಿ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಟಿಪ್ಪುನಗರದಲ್ಲಿ ಶೋಯಬ್ ಅಬ್ಬನ್ನವರ ಎಂಬುವನಿಗೆ ಚೂರಿ ಇರಿಯಲಾಗಿದ್ದು, ತೀವ್ರ ರಕ್ತಸ್ರಾವವಾಗಿ ಕಿಮ್ಸಗೆ ದಾಖಲು ಮಾಡಲಾಗಿದೆ.  ಹಳೇಹುಬ್ಬಳ್ಳಿ ಪೊಲೀಸರು ಆರೋಪಿಗಳ ಪತ್ತೆ ನಡೆಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next