Advertisement

Equestrian: ಆಡಳಿತ ನಿರ್ವಹಣೆಗೆ ಸಮಿತಿ

12:44 AM May 25, 2024 | Team Udayavani |

ಹೊಸದಿಲ್ಲಿ: ಭಾರತೀಯ ಈಕ್ವೆಸ್ಟ್ರಿಯನ್‌ ಒಕ್ಕೂಟದ ಆಡಳಿತ ನಿರ್ವಹಣೆಗೆ ದೆಹಲಿ ಉಚ್ಚ ನ್ಯಾಯಾಲಯ ಮಧ್ಯಾಂತರ ಸಮಿತಿಯನ್ನು ನೇಮಿಸಿದೆ.

Advertisement

ರಾಷ್ಟ್ರೀಯ ಕ್ರೀಡಾ ಸಂಸ್ಥೆಯೊಂದರ ಆಡಳಿತದಲ್ಲಿ ತಲೆಹಾಕಲು ಕೋರ್ಟ್‌ಗೆ ಇಷ್ಟವಿಲ್ಲ. ಆದರೆ ಇಲ್ಲಿನ ಆಡಳಿತ ಸಂಪೂರ್ಣವಾಗಿ ಹದಗೆಟ್ಟಿರುವ ಕಾರಣ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೇ ಇಲ್ಲಿ ಸಷ್ಟವಾಗಿ ಅನುಚಿತತೆ ಹಾಗೂ ನಿರಂಕುಶ ಆಡಳಿತ ನಡೆಸಲಾಗುತ್ತಿದೆ. ಇದನ್ನು ಗಮನಿಸಿದ ಮೇಲೂ ಸುಮ್ಮನಿರಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ತಾರಾ ವಿ. ಗುಂಜು ಹೇಳಿದ್ದಾರೆ.

ಕೋರ್ಟ್‌ ನೇಮಕ ಮಾಡಿರುವ ಸಮಿತಿಗೆ ಮಾಜಿ ನ್ಯಾಯಮೂರ್ತಿ ನಜ್ಮಿ ವಜೀರಿ ಮುಖ್ಯಸ್ಥರಾಗಿದ್ದರೆ, ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌.ವೈ. ಖುರೇಶಿ ವೀಕ್ಷಕ ಹಾಗೂ ವಕೀಲೆ ರೋಹಿಣಿ ಮೂಸಾ ಸದಸ್ಯರಾಗಿದ್ದಾರೆ.

ರಾಷ್ಟ್ರೀಯ ಈಕ್ವೆಸ್ಟ್ರಿಯನ್‌ ಫೆಡರೇಶನ್‌ನಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ರಾಜಸ್ಥಾನ ಈಕ್ವೆಸ್ಟ್ರಿಯನ್‌ ಫೆಡರೇಶನ್‌ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಕೋರ್ಟ್‌ ಈ ನಿರ್ಧಾರ ಕೈಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next