Advertisement

ಕುಡುಕರು, ಅಲೆಮಾರಿಗಳಿಂದಲೇ ಪರಿಸರ ಸ್ವಚ್ಛಗೊಳಿಸಿದ ಪೊಲೀಸರು !

11:10 PM Jul 09, 2020 | Sriram |

ಕೂಳೂರು: ಸ್ವಚ್ಛ- ಸುಂದರವಾಗಿದ್ದ ಕೂಳೂರಿನ ಮೇಲ್ಸೇ ತುವೆಯ ಕೆಳಭಾಗವನ್ನು ಅಲೆಮಾರಿಗಳು ಹಾಗೂ ಕುಡುಕರು ಆಶ್ರಯತಾಣವಾಗಿಸಿ ಗಬ್ಬೆದ್ದು ನಾರುವಂತೆ ಮಾಡಿದ್ದು, ಕಾವೂರು ಪೊಲೀಸರು ಅವರಿಂದಲೇ ಸ್ವಚ್ಛಗೊಳಿಸಿದ್ದಾರೆ.

Advertisement

ಕೆಲವರು ಇಲ್ಲಿ ನಿತ್ಯವೂ ಮದ್ಯಪಾನ ಮಾಡಿ ಪ್ಲಾಸ್ಟಿಕ್‌ ತ್ಯಾಜ್ಯ, ಕಸಕಡ್ಡಿಗಳನ್ನು ಎಸೆದು ಪರಿಸರವನ್ನು ಗಬ್ಬೆದ್ದು ನಾರು ವಂತೆ ಮಾಡುತ್ತಿದ್ದರು.

ಕಾವೂರು ಪೊಲೀಸ್‌ ಠಾಣೆಯ ಶಿವಪ್ಪ ಗೌಡ ಎಸ್‌. ಅವರು ಸಹ ಸಿಬಂದಿಯೊಂದಿಗೆ ದಾಳಿ ನಡೆಸಿದ್ದು, ಈ ಸಂದರ್ಭ ಕೂಳೂರಿನ ಮೇಲ್ಸೇತುವೆ ಕೆಳಭಾಗದಲ್ಲಿ ಮದ್ಯ ಸೇವನೆಯಲ್ಲಿ ನಿರತರಾಗಿದ್ದವರನ್ನು, ಅಲೆಮಾರಿಗಳನ್ನು ತೆರವುಗೊಳಿಸಿ, ಕುಡುಕರಿಂದಲೇ ಅಲ್ಲಿನ ಪರಿಸರವನ್ನು ಸ್ವಚ್ಛಗೊಳಿಸಿ ಎಚ್ಚರಿಕೆಯನ್ನು ನೀಡಿದರು. ಇದೇ ಸಂದರ್ಭ ಅಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಪರಿಸರವನ್ನು ಸ್ವತ್ಛತೆಯ ಮಹತ್ವದ ಕುರಿತು ಮಾಹಿತಿ ನೀಡಿ ವಿವರಿಸಿದರು. ಶಿವಪ್ಪ ಗೌಡ ನೇತೃತ್ವದ ತಂಡದ ಕಾರ್ಯವು ಕೂಳೂರಿನ ಜನರ ಮೆಚ್ಚುಗೆಗೆ ಪ್ರಶಂಸೆಗೆ ಪಾತ್ರವಾಗಿದೆ.

ಈ ಸಂದರ್ಭ ಕಾರ್ಯಾಚರಣೆ ಯಲ್ಲಿ ಪೊಲೀಸರೊಂದಿಗೆ ಸ್ಥಳೀಯ ಪ್ರಮುಖರಾದ ರಮೇಶ್‌ ಶೆಟ್ಟಿ ವಿವೇಕ ನಗರ, ಸುರೇಶ್‌ ಕುಲಾಲ್‌, ರಾಜೇಶ್‌ ಸಹಕರಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next