Advertisement

ಸಸಿ ನೆಟ್ಟು ಪೋಷಿಸಿ, ಪರಿಸರ ಸಂರಕ್ಷಿಸಿ

05:33 PM Mar 07, 2020 | Suhan S |

ಮದ್ದೂರು: ಮಾನವ ಅಗತ್ಯಕ್ಕೆ ಅನುಗುಣವಾಗಿ ಮರ ಗಿಡಗಳ ಕಡಿದು ಹೈಟೆಕ್‌ ಕಟ್ಟಡಗಳು ನಿರ್ಮಿಸುತ್ತಿರುವುದರಿಂದ ಬಿಸಿಲಿನ ತಾಪಮಾನ ಹೆಚ್ಚಾಗಿ ಮಾರಕ ರೋಗಗಳು ಕಾಣಿಸಿಕೊಳ್ಳುತ್ತಿವೆ ಎಂದು ವೃತ್ತ ನಿರೀಕ್ಷಕ ಕೆ. ಆರ್‌.ಪ್ರಸಾದ್‌ ತಿಳಿಸಿದರು.

Advertisement

ತಾಲೂಕಿನ ಆಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕುಮಾರಸುಧಾ ಸಾಮಾಜಿಕ ಸೇವಾ ಟ್ರಸ್ಟ್‌ ಆಯೋಜಿಸಿದ್ದ ವನ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಪರಿಸರ ಮಾಲಿನ್ಯದಿಂದಾಗಿ ಮಾನವ ಒಂದಿಲ್ಲೊಂದು ಸಮಸ್ಯೆಗೆ ತುತ್ತಾಗುತ್ತಿದ್ದು ಪ್ರತಿಯೊಬ್ಬರು ಮನೆಯ ಮುಂದೆ ಹಾಗೂ ಜಮೀನುಗಳಲ್ಲಿ ಸಸಿ ನೆಟ್ಟು ಪೋಷಿಸಿ ಪರಿಸರ ಸಮತೋಲನ ಕಾಪಾಡಬೇಕು ಎಂದರು. ಡಾ.ಜೈಭೀಮ್‌ ದಲಿತ ಸೇವಾ ಸಮಿತಿ ಅಧ್ಯಕ್ಷ ಶಿವಲಿಂಗಯ್ಯ ಮಾತನಾಡಿ, ಪರಿಸರ ಸಂರಕ್ಷಣೆ ಕೆಲಸ ಪುಣ್ಯದ ಕೆಲಸವಾಗಿದ್ದು ಸಾಲು ಮರದ ತಿಮ್ಮಕ್ಕರಂತೆ ಸಸಿ ನೆಟ್ಟು ಪೋಷಿಸುವ ಮೂಲಕ ಶುದ್ಧ ಗಾಳಿ, ನೀರು, ನೆರಳನ್ನು ಪಡೆಯಲು ಮುಂದಾಗಬೇಕು. ಅವರ ಸೇವೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕುಮಾರಸುಧಾ ಸಾಮಾಜಿಕ ಸೇವಾ ಟ್ರಸ್ಟ್‌ ಅಧ್ಯಕ್ಷ ವೇಣು ಗೋಪಾಲ್‌ ಉಚಿತ ಸಸಿ ವಿತರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರವಿ, ಮುಖ್ಯಶಿಕ್ಷಕ ಶಿವಣ್ಣ, ರಮೇಶ್‌, ಶಿಕ್ಷಕರಾದ ಮಧುಸೂದನ್‌, ಸುರೇಶ್‌, ಕುಮಾರ್‌, ಮಹ ದೇವಸ್ವಾಮಿ, ನಾಗರಾಜು, ಶ್ರೀನಿವಾಸ್‌, ಸವಿತಾ, ವಿಜಯಲಕ್ಷ್ಮೀ ಮತ್ತಿತರರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next