Advertisement

ಮನುಷ್ಯನಲ್ಲಿ ಪರಿಸರ ಪ್ರಜ್ಞೆ ಬಿತ್ತುವ ಅಗತ್ಯವಿದೆ

03:27 PM Jun 07, 2022 | Team Udayavani |

ಪಿರಿಯಾಪಟ್ಟಣ: ಮನುಷ್ಯನಿಗೆ ಪರಿಸರದ ಪ್ರಜ್ಞೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸರ ದಿನ ಆಚರಣೆಗೆ ಹೆಚ್ಚು ಹೊತ್ತು ನೀಡಬೇಕಾಗಿದೆ ಎಂದು ಹಿರಿಯ ಸಿವಿಲ್‌ ನ್ಯಾಯಧೀಶ ಎ.ಸಮೀವುಲ್ಲಾ ಹೇಳಿದರು.

Advertisement

ಪಟ್ಟಣದ ಯಜಮಾನ್‌ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯರಾದವರು ನಮ್ಮ ಸುತ್ತಮುತ್ತಲ ಪರಿಸರವನ್ನು ಉತ್ತಮವಾಗಿಟ್ಟುಕೊಳ್ಳುವ ಜವಾಬ್ದಾರಿ ಇರಬೇಕು. ಸ್ವಾರ್ಥಕ್ಕಾಗಿ ಮನುಷ್ಯ ಇಂದು ಪರಿಸರವನ್ನು ನಾಶಮಾಡುತ್ತಿದ್ದಾನೆ. ಇಂಥ ಸಂದರ್ಭದಲ್ಲಿ ಪರಿಸರ ದಿನಾಚರಣೆಯ ಮೂಲಕ ಮರಗಿಡಗಳನ್ನು ನೆಟ್ಟು ಪರಿಸರದ ಅಭಿವೃದ್ಧಿಗೆ ಮುಂದಾಗಬೇಕು. ಈಗಾಗಲೇ ಯುವಕರಲ್ಲಿ ಇದರ ಬಗ್ಗೆ ಕಾಳಜಿ ಮೂಡುತ್ತಿದೆ ಆದಾಗಿಯೂ ಹೆಚ್ಚಿನ ಮಟ್ಟದಲ್ಲಿ ಇಂಥ ಕಾರ್ಯಕ್ರಮಗಳು ನಡೆದು ಪರಿಸರ ಅಭಿವೃದ್ಧಿಯಾಗಬೇಕು ಎಂದು ತಿಳಿಸಿದರು.

ನ್ಯಾಯಾಧೀಶರಾದ ಎಂ.ಆರ್‌.ಯೋಗೇಶ್‌ ಮಾತನಾಡಿ, ಇಂದಿನ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಬೇಕು, ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಪರಿಸರದ ಪಾಠಗಳು ಮತ್ತು ಅದರ ಅವಶ್ಯಕತೆ ಅದರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು. ವಲಯ ಅರಣ್ಯಾಧಿಕಾರಿ ರತನ್‌ಕುಮಾರ್‌ ಮಾತನಾಡಿ, ಮನುಕುಲದ ಉಳಿವಿಗಾಗಿ ಪರಿಸರ ಅತ್ಯಗತ್ಯ, ಇಡೀ ಸೌರಮಂಡಲದಲ್ಲಿ ಮನುಷ್ಯ ವಾಸಿಸಲು ಯೋಗ್ಯವಾದ ಪರಿಸರ ಇರುವುದು ಭೂಮಿಯಲ್ಲಿ ಮಾತ್ರ ಆದ್ದರಿಂದ ಇದನ್ನು ಸಂರಕ್ಷಣೆ ಮಾಡಬೇಕು. ನೆಲ-ಜಲವನ್ನು ಉಳಿಸಿ ಮುಂದಿನ ಪೀಳಿಗೆಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಬೀಜ ಬಿತ್ತೋಣ ಅಭಿಯಾನವನ್ನು ಆರಂಭಿಸಿದ್ದು ಇದೇ ಕಾರ್ಯಕ್ರಮದಲ್ಲಿ ತೇಗ ಸಸಿಗಳನ್ನು ಬಿತ್ತುವ ಮೂಲಕ ಚಾಲನೆ ನೀಡಲಾಗಿದೆ ಜೂ.5 ರಿಂದ 12ರ ವರೆಗೆ ಈ ಅಭಿಯಾನ ಕೈಗೊಳ್ಳಳಲಾಗಿದ್ದು ಇದಕ್ಕೆ ಎಲ್ಲಾ ಸಂಘಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.

ಪರಿಸರ ದಿನಾಚಾರಣೆ ಅಂಗವಾಗಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗೆ ನ್ಯಾಯಾಧೀಶರು ಪ್ರಶಸ್ತಿ ಪತ್ರ ವಿತರಣೆ ಮಾಡಿದರು. ಶಾಲಾ ಆವರಣದಲ್ಲಿ ನ್ಯಾಯಾಧೀಶರು ಮಕ್ಕಳೊಂದಿಗೆ ಸೇರಿ ತೇಗದ ಮರದ ಬೀಜ ಗಳನ್ನು ಬಿತ್ತುವ ಮೂಲಕ ಅರಣ್ಯ ಇಲಾಖೆಯ ಅಭಿಯಾನಕ್ಕೆ ಚಾಲನೆ ನೀಡಿದರು.

ಯಜಮಾನ್‌ ಫೌಂಡೇಶನ್‌ ಅಧ್ಯಕ್ಷ ಪಿ.ಕೆ. ನಾಗಪ್ಪ, ವಕೀಲರಾದ ಬಿ.ಎನ್‌.ಹರೀಶ್‌, ಶ್ರೀನಿವಾಸ್‌, ಅಕ್ಷರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಧನಂಜಯ, ಯಜಮಾನ್‌ ಪಬ್ಲಿಕ್‌ ಶಾಲೆಯ ಮುಖ್ಯ ಶಿಕ್ಷಕ ಜಗದೀಶ್‌, ಯಜಮಾನ್‌ ಫೌಂಡೇಶನ್‌ ಟ್ರಸ್ಟಿ ನಾಗಮಣಿ, ಡಿಆರ್‌ಎಫ್ ಒಗಳಾದ ಪಾರ್ವತಿ, ಮಧುಸೂಧನ್‌, ಮಹೇಶ್‌, ಅರಣ್ಯ ರಕ್ಷಕರಾದ ಪೃಥ್ವಿ, ಸತೀಶ್‌, ಯಲಗೂರೇಶ್‌, ರಾಜಪ್ಪ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next