Advertisement

ಆಕರ್ಷಿಸುತ್ತಿವೆ ಮಳಿಗೆ, ಮನೋರಂಜನೆ ಆಟಗಳು

09:49 PM Nov 24, 2019 | Sriram |

ವಿಶೇಷ ವರದಿ-ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮದಲ್ಲಿ ಭಾಗಿಯಾ ಗಲು ಸಾವಿರಾರು ಭಕ್ತರು ದಿನನಿತ್ಯ ಆಗಮಿ ಸುತ್ತಿದ್ದು, ಸಕಲ ವ್ಯವಸ್ಥೆಗಳನ್ನೂ ಅಚ್ಚು ಕಟ್ಟಾಗಿ ನಿರ್ವಹಿಸಲಾಗುತ್ತಿದೆ. ಶಾಂತಿ ಸುವ್ಯವಸ್ಥೆಗಾಗಿ ಪೊಲೀಸ್‌ ಬಂದೋಬಸ್ತನ್ನೂ ಕೈಗೊಳ್ಳಲಾಗಿದೆ.

Advertisement

ವಸ್ತುಪ್ರದರ್ಶನ ಮಂಟಪ ದಲ್ಲಿ 197 ಮಳಿಗೆ ಹೊರತು ಪಡಿಸಿ ಮುಖ್ಯ ದ್ವಾರದಿಂದ ವಸತಿ ಗೃಹ ಸಾಕೇತವರೆಗೂ ರಸ್ತೆಯ ಇಕ್ಕೆಲಗಳಲ್ಲಿ ತಿಂಡಿ-ತಿನಿಸು, ಹಣ್ಣುಗಳು, ಮಂಜುನಾಥ ಸ್ವಾಮಿ ಭಾವಚಿತ್ರ ಮಾರಾಟ, ಮನೆ ಬಳಕೆ ವಸ್ತುಗಳು ಸಹಿತ 300ಕ್ಕೂ ಹೆಚ್ಚು ಮಳಿಗೆಗಳು ಆಕರ್ಷಿಸುತ್ತಿವೆ.

ಮನೋರಂಜನೆ
ಮನೋರಂಜನೆಗಾಗಿ ಅಮೃತ ವರ್ಷಿಣಿ ಸಭಾಭವನ ಹಿಂಭಾಗ ಡ್ರ್ಯಾಗನ್‌, ಕೊಲಂಬಸ್‌, ಡ್ಯಾನ್ಸ್‌ ಕಾರ್‌, ಜೈಂಟ್‌ ವೀಲ್‌ ಮತ್ತಿತರ ಗೇಮ್‌ಗಳು ಮಕ್ಕಳು-ಹಿರಿಯರನ್ನು ಆಕರ್ಷಿಸುತ್ತಿವೆ.

ಅನ್ನದಾಸೋಹ
ಶ್ರೀಕ್ಷೇತ್ರದಲ್ಲಿ ಅನ್ನಪ್ರಸಾದ ಸ್ವೀಕರಿಸುವ ಭಕ್ತರಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ. ನ. 24ರಂದು 25ರಿಂದ 30 ಸಾವಿರ ಭಕ್ತರು ಅನ್ನಪ್ರಸಾದವನ್ನು ಸ್ವೀಕರಿಸಿದ್ದಾರೆ. 25ರಂದು 40-45 ಸಾವಿರ, 26ರಂದು 1.50 ಲಕ್ಷಕ್ಕೂ ಹೆಚ್ಚು ಭಕ್ತರ ನಿರೀಕ್ಷೆ ಹೊಂದಲಾಗಿದೆ ಎಂದು ಅನ್ನಛತ್ರದ ಮೇಲುಸ್ತುವಾರಿ ಸುಬ್ರಹ್ಮಣ್ಯ ಪ್ರಸಾದ್‌ ತಿಳಿಸಿ¨ªಾರೆ.

 ಬಂದೋಬಸ್ತ್
ನ. 25, 26ರಂದು ಓರ್ವ ವೃತ್ತ ನಿರೀಕ್ಷಕರು, 210 ಹೋಮ್‌ ಗಾರ್ಡ್‌, 210 ಪೊಲೀಸ್‌, 20 ಎಎಸ್‌ಐ , 1 ಅಗ್ನಿಶಾಮಕ ವಾಹನ, ಜಿಲ್ಲಾ ಮೀಸಲು ಪಡೆಯ 15 ಪೊಲೀಸರ ತಂಡ, 15 ಮಂದಿ ಸಂಚಾರಿ ಪೊಲೀಸ್‌ ತಂಡ ಕಾರ್ಯ ನಿರ್ವಹಿಸಲಿದೆ. ಡಿಸಿಎಂ ಡಾ| ಅಶ್ವತ್ಥ ನಾರಾಯಣ ಅವರು ಆಗಮಿಸುವ ಹಿನ್ನೆಲೆ 26ರಂದು ಹೆಚ್ಚುವರಿ ಬಂದೋಬಸ್ತ್ ಇರಲಿದೆ.
 - ಸಂದೇಶ್‌ ಪಿ.ಜಿ.
ಬೆಳ್ತಂಗಡಿ ಪೊಲೀಸ್‌ ವೃತ್ತ ನಿರೀಕ್ಷಕರು.

Advertisement
Advertisement

Udayavani is now on Telegram. Click here to join our channel and stay updated with the latest news.

Next