Advertisement

ಕಾಸರಗೋಡು ಪೆರ್ಲ: ಎಂಡೋಸಲ್ಫಾನ್‌ ಸಂತ್ರಸ್ತ ನಿಧನ

05:00 PM Apr 02, 2019 | keerthan |

ಬದಿಯಡ್ಕ: ಎಂಡೋಸಲ್ಫಾನ್‌  ಪೀಡಿತರಾಗಿ ಹಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತಪಟ್ಟ ಘಟನೆ ಸೋಮವಾರ ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ನಡೆದಿದೆ.

Advertisement

ಪೆರ್ಲ ಬಳಿಯ ಬಾಕಿಲಪದವು ನಿವಾಸಿ ಕೃಷ್ಣ ನಾಯ್ಕರ ಪುತ್ರ ಶಿವಪ್ರಸಾದ್‌ (19) ಮೃತಪಟ್ಟ ದುರ್ದೈವಿ. ಜನ್ಮತಾ ಇವರಿಗೆ ಅಸೌಖ್ಯ ಕಾಣಿಸಿಕೊಂಡಿತ್ತು. ಶರೀರ ಬೆಳವಣಿಗೆಯಿಲ್ಲದೆ ಸಪೂರವಾಗುವ ರೋಗ ಇವರಿಗೆ ಬಾಧಿಸಿತ್ತು. ಇದರಿಂದ ಕೆಲವು ವರ್ಷಗಳಿಂದ ನಡೆದಾಡಲಾಗದೆ ಹಾಸಿಗೆ ಹಿಡಿದಿದ್ದರು.

ಮಂಗಳೂರು, ಪರಿಯಾರಂ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸೋಮವಾರ ಅನಾರೋಗ್ಯ ಉಲ್ಬಣಿಸಿ ತಮ್ಮ ನಿವಾಸದಲ್ಲಿ ಮೃತರಾಗಿದ್ದಾರೆ.

ಶಿವಪ್ರಸಾದ್‌ ರ ಹೆಸರು ಎಣ್ಮಕಜೆ ಪಂಚಾಯತ್‌ ಒಂದನೇ ವಾರ್ಡ್‌ನ ಎಂಡೋಸಲ್ಫಾನ್‌ ಸಂತ್ರಸ್ತರ ಯಾದಿಯಲ್ಲಿದ್ದು, ಸೌಲಭ್ಯಗಳು ಲಭಿಸುತ್ತಿತ್ತು. ಮೃತರು ತಂದೆ, ತಾಯಿ ಅದಿತಿ, ಸಹೋದರ ದೇವರಾಜ್‌, ಸಹೋದರಿ ಶ್ರೀ ಲಕ್ಷ್ಮಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next