ಮಾಡಲು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎ) ಒಪ್ಪಿದ ಹಿನ್ನೆಲೆಯಲ್ಲಿ 10 ದಿನಗಳಿಂದ ರಾಜ್ಯಾದ್ಯಂತ ಮುಂದುವರಿದಿದ್ದ ಸರಕು, ಸಾಗಣೆದಾರರ ಮುಷ್ಕರ ಶನಿವಾರ ಅಂತ್ಯಗೊಂಡಿದೆ.
Advertisement
ಹೈದರಾಬಾದ್ನಲ್ಲಿ ಶನಿವಾರ ಐಆರ್ಡಿಎ ನಡೆಸಿದ ಸಭೆಯಲ್ಲಿ ವಿಮಾ ಶುಲ್ಕವನ್ನು ಇಳಿಕೆ ಮಾಡಲು ಪ್ರಾಧಿಕಾರ ಒಪ್ಪಿದ್ದರಿಂದ ಸರಕುಸಾಗಣೆದಾರರ ಪ್ರಮುಖ ಬೇಡಿಕೆಗೆ ಕೇಂದ್ರ ಸರ್ಕಾರ ಮಣಿದಂತಾಗಿದೆ. ಜತೆಗೆ ಇನ್ನೂ ಕೆಲ ಬೇಡಿಕೆಗಳಿಗೆ ಸ್ಪಂದನೆ ಸಿಕ್ಕಿದ್ದು, ರಾಜ್ಯ ಸರ್ಕಾರವೂ ತನ್ನ ವ್ಯಾಪ್ತಿಗೆ ಸಂಬಂಧಪಟ್ಟ ಬೇಡಿಕೆಗಳನ್ನು ಪೂರೈಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ದಕ್ಷಿಣ ವಲಯ ಮೋಟಾರ್ ಸಾಗಣೆದಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಖಪ್ಪ ಮುಷ್ಕರ ಹಿಂಪಡೆದಿರುವುದಾಗಿ ಶನಿವಾರ ಸಂಜೆ ಪ್ರಕಟಿಸಿದರು.
ಡಿಎ ಸದಸ್ಯ ಪಿ.ಜೆ. ಜೋಸೆಫ್, ಆಂಧ್ರ ಪ್ರದೇಶದ ಸಾರಿಗೆ ಆಯುಕ್ತರು ಸೇರಿದಂತೆ ಹಲವರು ಪಾಲ್ಗೊಂಡಿದ್ದ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು. ಸರಕು ಸಾಗಣೆ ವಾಹನಗಳಿಗೆ ಮೂರನೇ ವ್ಯಕ್ತಿ ವಿಮಾ ಶುಲ್ಕಇಳಿಕೆ ಮಾಡಬೇಕೆಂಬುದು ಪ್ರಮುಖ ಬೇಡಿಕೆಯಾಗಿದ್ದು, ಈ ಕುರಿತು ಸುದೀರ್ಘ ಚರ್ಚೆ ನಡೆಯಿತು. ಕೊನೆಗೆ ವಿಮಾ ಶುಲ್ಕ ಮೊತ್ತದಲ್ಲಿ ಶೇ.23ರಷ್ಟು ಇಳಿಕೆ ಮಾಡಿ ಶೇ.27ರಷ್ಟು ಶುಲ್ಕ ವಿಧಿಸಲು ಪ್ರಾಧಿಕಾರ ಒಪ್ಪಿತು. ಇದರಿಂದ ವಿಮಾ ಸಂಸ್ಥೆಗಳಿಗೆ ಸುಮಾರು 16,000 ಕೋಟಿ ರೂ. ನಷ್ಟವಾಗಲಿದೆ ಎಂದು ಐಆರ್ಡಿಎ ತಿಳಿಸಿತು’ ಎಂದು ಹೇಳಿದರು. “ವಾಹನಗಳಿಗೆ ವಿಮಾ ಶುಲ್ಕವನ್ನು ಮನಬಂದಂತೆ ಏರಿಕೆ ಮಾಡುವುದನ್ನು ನಿಯಂತ್ರಿಸುವ ಸಲುವಾಗಿ
ಸಮಿತಿ ರಚಿಸಬೇಕೆಂಬ ಮನವಿಗೂ ಪ್ರಾಧಿಕಾರ ಒಪ್ಪಿತು. ಅದರಂತೆ ದಕ್ಷಿಣ ಭಾರತ ಮೋಟಾರ್ ಟ್ರಾನ್ಸ್ಪೊರ್ಟ್ ಅಸೋಸಿಯೇಷನ್ನ ಇಬ್ಬರು ಪ್ರತಿನಿಧಿಗಳು, ಅಖೀಲ ಭಾರತ ಮೋಟಾರ್ ಟ್ರಾನ್ಸ್ಪೊರ್ಟ್ ಕಾಂಗ್ರೆಸ್ನಿಂದ ಮೂವರು
ಪ್ರತಿನಿಧಿಗಳು ಹಾಗೂ ಐಆರ್ಡಿಎ ಮೂವರು ಪ್ರತಿನಿಧಿಗಳನ್ನು ಒಳಗೊಂಡ ಕಾಯಂ ಸಮಿತಿ ರಚಿಸುವುದಾಗಿ ಪ್ರಾಧಿಕಾರ ತಿಳಿಸಿದೆ’ ಎಂದು ಅವರು ಹೇಳಿದರು.
Related Articles
ಮಾಡಲು ಪ್ರಯತ್ನಿಸುವುದಾಗಿ ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಹಾಗೆಯೇ ಅನ್ಯ ರಾಜ್ಯಗಳ ನೋಂದಣಿ ವಾಹನಗಳು ರಾಜ್ಯ ಪ್ರವೇಶಿಸಲು ವಿಧಿಸುವ ಶುಲ್ಕಕ್ಕೂ ವಿನಾಯ್ತಿಗೂ ನೀಡುವ ಬಗ್ಗೆ ಚರ್ಚಿಸುವುದಾಗಿ ಸಚಿವರು ತಿಳಿಸಿದ್ದು, ಏ.20ರಂದು ಸಭೆ ಆಯೋಜಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ವಿವರಿಸಿದರು.
Advertisement
ಹತ್ತಾರು ಸಾವಿರ ಕೋಟಿ ರೂ. ನಷ್ಟಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೇಡಿಕೆಗಳಿಗೆ ಸ್ಪಂದಿಸಿರುವ ಹಿನ್ನೆಲೆಯಲ್ಲಿ ಮುಷ್ಕರ ಹಿಂಪಡೆಯಲಾಗಿದೆ. 10 ದಿನ ನಡೆದ ಮುಷ್ಕರದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೂ ನಷ್ಟ ಉಂಟಾಗಿದ್ದು, ಒಟ್ಟಾರೆ ದಕ್ಷಿಣ ಭಾರತದ ವಹಿವಾಟಿನ ಮೇಲೆ ತೀವ್ರ ಹೊಡೆತಬಿದ್ದಿದ್ದು, ಸುಮಾರು 10,000 ಕೋಟಿ ರೂ. ಗಿಂತ ಹೆಚ್ಚು ನಷ್ಟ ಸಂಭವಿಸಿರಬಹುದು’ ಎಂದು
ಹೇಳಿದರು. ಮಾರ್ಚ್ 30ರ ಮಧ್ಯರಾತ್ರಿಯಿಂದ ಸರಕು ಸಾಗಣೆದಾರರು ಮುಷ್ಕರ ಆರಂಭಿಸಿದರು. ಬಳಿಕ ಐಆರ್ಡಿಎ ನಡೆಸಿದ ಎರಡೂ ಸಭೆ ವಿಫಲವಾಗಿದ್ದರಿಂದ ಹೋರಾಟ ಮುಂದುವರಿದಿತ್ತು. ಹಾಗಾಗಿ ಓಲಾ ಮತ್ತು ಉಬರ್ ಟ್ಯಾಕ್ಸಿ ಮಾಲೀಕರ ಸಂಘ ಕೂಡ ಶನಿವಾರದಿಂದ ಸೇವೆ ಸ್ಥಗಿತಗೊಳಿಸುವುದಾಗಿ ಪ್ರಕಟಿಸಿತ್ತು. ಆದರೆ ಶನಿವಾರದ ಸಭೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಮುಷ್ಕರ ಮುಕ್ತಾಯವಾಗಿದೆ.