Advertisement

ಎನ್‌ಕೌಂಟರ್‌: ಐಸಿಸ್‌ ಪ್ರೇರಿತ ಇಬ್ಬರ ಹತ್ಯೆ

09:07 AM Jun 14, 2019 | sudhir |

ಶ್ರೀನಗರ: ಐಸಿಸ್‌ ಉಗ್ರ ಸಂಘಟನೆಯ ಸಿದ್ಧಾಂತದಿಂದ ಪ್ರೇರೇಪಿತರಾಗಿದ್ದ ಇಬ್ಬರು ಸ್ಥಳೀಯ ಉಗ್ರಗಾಮಿಗಳನ್ನು ಜಮ್ಮು-ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮಂಗಳವಾರ ಹೊಡೆದುರುಳಿಸಿವೆ.

Advertisement

ಸ್ಥಳದಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಉಗ್ರರನ್ನು ಕುಲ್ಗಾಂ ಜಿಲ್ಲೆಯ ಸಯಾರ್‌ ಅಹ್ಮದ್‌ ಭಟ್‌ ಮತ್ತು ಅವ್ನಿàರಾ ಪ್ರಾಂತ್ಯದ ಶಾಕಿರ್‌ ಅಹ್ಮದ್‌ ಎಂದು ಗುರುತಿಸಲಾಗಿದೆ.

ಗುಂಡಿನ ಚಕಮಕಿ: ಇದಾದ ಬಳಿಕ, ಸಂಜೆ ಬಾರಾಮುಲ್ಲಾ ಜಿಲ್ಲೆಯ ಸೋಪೋರ್‌ನಲ್ಲೂ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next