Advertisement

ಕೈ ಹಿಡಿದ ಉದ್ಯೋಗ ಖಾತ್ರಿ

09:35 PM Jun 01, 2021 | Team Udayavani |

ಕೊಪ್ಪಳ: ಕೊರೊನಾ ಎರಡನೇ ಅಲೆ ಲಾಕ್‌ಡೌನ್‌ನಲ್ಲಿ ಸಾಮಾಜಿಕ ಅಂತರದೊಂದಿಗೆ ನರೇಗಾ ಕಾಮಗಾರಿಗೆ ಅವಕಾಶ ನೀಡಿದ್ದರಿಂದ ಹಲವು ಕುಟುಂಬಗಳ ಜೀವನ ನಿರ್ವಹಣೆಗೆ ಕನಕಗಿರಿ ತಾಲೂಕಿನಲ್ಲಿ ನರೇಗಾ ಕೆಲಸ ಅನುಕೂಲವಾಗಿದೆ.

Advertisement

ತಾಲೂಕಿನ ಚಿಕ್ಕಮಾದಿನಾಳ ಗ್ರಾಪಂ ವ್ಯಾಪ್ತಿಯ ನಾಗಲಾಪುರ ಅರಣ್ಯ ಪ್ರದೇಶದಲ್ಲಿ ಸಾಮಾಜಿಕ ಅರಣ್ಯ ವಲಯ ಗಂಗಾವತಿ ಹಾಗೂ ಚಿಕ್ಕಮಾದಿನಾಳ ಗ್ರಾಪಂನಿಂದ ಬಂಕಾಪುರ ಗ್ರಾಮದ ಒಟ್ಟು 76 ಜನರಿಗೆ ನರೇಗಾ ಕೆಲಸ ನೀಡಲಾಗಿದೆ. ಕೂಲಿ ಕಾರ್ಮಿಕರಲ್ಲಿ ಕೆಲವರು ಬೆಂಗಳೂರು, ಮಂಗಳೂರು ನಗರ ಪ್ರದೇಶಕ್ಕೆ ಗುಳೆ ಹೋಗಿ ಲಾಕ್‌ ಡೌನ್‌ ನಿಂದ ಮರಳಿ ಸ್ವಗ್ರಾಮಕ್ಕೆ ಬಂದಿದ್ದರು. ಅವರಿಗೆ ಯಾವುದೇ ಕೆಲಸ ಇಲ್ಲವಾಗಿತ್ತು. ಉದ್ಯೋಗ ಖಾತ್ರಿ ಯೋಜನೆಯಡಿ ಅರಣ್ಯ ಪ್ರದೇಶದಲ್ಲಿ ಇಂಗುಗುಂಡಿ ತೆಗೆಯುವ ಕೆಲಸ ನೀಡಲಾಗಿದೆ.

2021ರ ಮೇ 15ರಿಂದ ಸತತ ಈ ಕೂಲಿ ಕಾರ್ಮಿಕರಿಗೆ 16 ದಿನ ಕೆಲಸ ನೀಡಲಾಗಿದೆ. 15 ಅಡಿ ಉದ್ದ, 3 ಅಡಿ ಅಗಲ ಹಾಗೂ 3 ಅಡಿ ಆಳವಿರುವ ಒಟ್ಟು 300 ಟ್ರಂಚ್‌ಗಳನ್ನು ಕೂಲಿಕಾರ್ಮಿಕರು ತೆಗೆದಿದ್ದಾರೆ.

ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ 1216 ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ. ಮಳೆ ಬಂದರೆ ಈ ಟ್ರಂಚ್‌ಗಳಲ್ಲಿ ಲಕ್ಷಾಂತರ ಲೀಟರ್‌ ನೀರು ಇಂಗಲಿದೆ. ಇದರಿಂದ ಮಣ್ಣು ಮತ್ತು ತೇವಾಂಶ ಸಂರಕ್ಷಣೆಗೆ ಸಹಕಾರಿ ಆಗಲಿದೆ. ಈ ಅರಣ್ಯ ಪ್ರದೇಶದಲ್ಲಿರುವ 16000 ಸಸಿಗಳು ಉತ್ತಮವಾಗಿ ಬೆಳೆಯಲು ಅನುಕೂಲವಾಗಲಿದೆ. ಮಳೆಗಾಲದಲ್ಲಿ ಉತ್ತಮ ಮಳೆಯಾದರೆ ಈ ಅರಣ್ಯ ಪ್ರದೇಶದಲ್ಲಿ ಅಗೆದ ಟ್ರಂಚ್‌ಗಳಲ್ಲಿ ಲಕ್ಷಾಂತರ ಲೀಟರ್‌ ನೀರು ಭೂಮಿ ಸೇರಲಿದೆ. ಪ್ರದೇಶದಲ್ಲಿ ಇರುವ ಗಿಡಗಳು ಹಸಿರಾಗಿ ಉತ್ತಮ ಪರಿಸರ ವಾತಾವರಣ ನಿರ್ಮಾಣವಾಗಲಿದೆ. ಇನ್ನೂ ಸುತ್ತಲಿನ ರೈತರ ಜಮೀನುಗಳಲ್ಲಿ ಇರುವ ಬೋರ್‌ವೆಲ್‌ ರಿಚಾರ್ಜ್‌ಗೂ ಸಹಕಾರಿ ಆಗಲಿದೆ.

ಮಣ್ಣು ಮತ್ತು ತೇವಾಂಶ ಸಂರಕ್ಷಣೆ ಮಾಡಲು ಅನುಕೂಲವಾಗಲಿದೆ. ಮಳೆಯಾಶ್ರಿತ ಇಂತಹ ಪ್ರದೇಶದಲ್ಲಿ ಎಸ್‌ ಎಂಸಿ ಕಾಮಗಾರಿ ನಿರ್ವಹಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next