Advertisement

ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ: ಸಬಿಹಾ ಭೂಮಿಗೌಡ

11:56 AM Oct 27, 2019 | Suhan S |

ಇಳಕಲ್ಲ: ವಿದ್ಯಾರ್ಥಿಗಳನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗೆ ಅಣಿಗೊಳಿಸಿ, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಬೇಕು ಎಂದು ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಉಪಕುಲಪತಿ ಸಬಿಹಾ ಭೂಮಿಗೌಡ ಹೇಳಿದರು.

Advertisement

ಶ್ರೀ ವಿಜಯ ಮಹಾಂತೇಶ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಕಾಲೇಜಿನ ಶೈಕ್ಷಣಿಕ ಪ್ರಗತಿ ವೀಕ್ಷಿಸಿ ಮಾತನಾಡಿದ ಅವರು, ಮಹಾವಿದ್ಯಾಲಯ ವಾರ್ಷಿಕ ಕಾರ್ಯಸೂಚಿ ಪ್ರಕಾರ ಕಾಲೇಜು ಕಾರ್ಯಚಟುವಟಿಕೆ ನಡೆಯುತ್ತಿರುವುದು ತೃಪ್ತಿದಾಯಕವಾಗಿದೆ ಎಂದರು.

ಸಂಘದ ಚೇರಮನ್‌ ಎಂ. ಜಿ. ಪಟ್ಟಣಶೆಟ್ಟರ ಮಾತನಾಡಿ, ವಿಜಯಮಹಾಂತೇಶ ವಿದ್ಯಾವರ್ಧಕ ಸಂಘ ಗುಣಾತ್ಮಕ ಶಿಕ್ಷಣಕ್ಕೆ ಶ್ರಮಿಸುತ್ತದೆ. ಸಂಘದ ಎಲ್ಲ 14 ಅಂಗಸಂಸ್ಥೆಗಳ ಕುರಿತು ಉಪಕುಲಪತಿಗಳಿಗೆ ಮಾಹಿತಿ ನೀಡಿದರು.

ಕಾಲೇಜು ಚೇರಮನ್‌ ಶರಣಪ್ಪ ಅಕ್ಕಿ ಮಾತನಾಡಿ, ಕಾಲೇಜು ಸ್ತ್ರೀ ಶಿಕ್ಷಣಕ್ಕೆ ಒತ್ತು ನೀಡಿದೆ. ವಿದ್ಯಾರ್ಥಿನಿಯರಿಗೆ ಎಲ್ಲ ಶೈಕ್ಷಣಿಕ ಮೂಲಭೂತ ಸೌಲಭ್ಯಗಳೊಂದಿಗೆ ಬೋಧಕ ಸಿಬ್ಬಂದಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ಸಂಘದ ಚೇರಮನ್‌ ಎಂ. ಜಿ. ಪಟ್ಟಣಶೆಟ್ಟರ ಹಾಗೂ ಕಾಲೇಜು ಚೇರಮನ್‌ ಶರಣಪ್ಪ ಅಕ್ಕಿ ಅವರನ್ನು ಸನ್ಮಾನಿಸಿದರು. ಪ್ರಾಚಾರ್ಯ ಬಸವರಾಜ ಸುಗ್ಗಮದ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next