Advertisement

ಮಾಧ್ಯಮ ವರದಿ ತಳ್ಳಿಹಾಕಿದ ಚಕ್ರವರ್ತಿ

12:52 AM Jun 18, 2019 | mahesh |

ಹೊಸದಿಲ್ಲಿ: ಲೋಕಸಭಾ ಚುನಾವಣೆ ವೇಳೆ, ಕಾಂಗ್ರೆಸ್‌ ಪಕ್ಷದ ಚುನಾವಣಾ ಸಂಶೋಧನಾ ಸಮಿತಿಯು ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗೆ ವಾಸ್ತವವನ್ನು ಮೀರಿದ ಸುಳ್ಳು ಅಂಕಿ-ಸಂಖ್ಯೆ ನೀಡುವ ಮೂಲಕ ಅವರನ್ನು ಯಾಮಾರಿಸಿದೆ ಎಂಬ ಮಾಧ್ಯಮ ವರದಿಗಳನ್ನು ಸಮಿತಿಯ ಮುಖ್ಯಸ್ಥ ಪ್ರವೀಣ್‌ ಚಕ್ರವರ್ತಿ ತಳ್ಳಿಹಾಕಿದ್ದಾರೆ.

Advertisement

ಪಕ್ಷದ ಚುನಾವಣಾ ಸಂಶೋಧನಾ ಸಮಿತಿಯಲ್ಲಿದ್ದ ಚಕ್ರವರ್ತಿ, ದಿವ್ಯ ಸ್ಪಂದನ (ನಟಿ ರಮ್ಯಾ) ಅವರು ಈ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ರಾಹುಲ್‌ರಿಗೆ ಪದೇ ಪದೆ ತಿಳಿಸುತ್ತಾ ಚುನಾವಣೆಯನ್ನು ಸಮರ್ಥ ವಾಗಿ ಎದುರಿಸುವಲ್ಲಿ ಪಕ್ಷ ದಿಕ್ಕು ತಪ್ಪು ವಂತೆ ಮಾಡಿದರು ಎಂಬ ವರದಿಗೆ ಚಕ್ರವರ್ತಿ ಹೀಗೆ ಪ್ರತಿಕ್ರಿಯಿಸಿದ್ದಾರೆ.

“”ನನ್ನ ಹೆಸರಿಗೆ ಕಳಂಕ ತರಲು ಹೀಗೆ ಮಾಡಲಾಗಿದೆ. ಇಂಥವು ಪತ್ರಿಕೋದ್ಯಮಕ್ಕೇ ಅಪಮಾನ ಮಾಡುವಂಥವು” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next