Advertisement

Tragedy ನಡೆದ ಸೂರಣಗಿ ಗ್ರಾಮಕ್ಕೆ ಬಂದ ಯಶ್; ಆಕ್ರಂದನ ಕಂಡು ಭಾವುಕ

07:09 PM Jan 08, 2024 | Team Udayavani |

ಗದಗ : ಜನ್ಮ ದಿನದ ಸಂಭ್ರಮದಲ್ಲಿ ಸಿಹಿ ಹಂಚಿ ಸಂಭ್ರಮಿಸಬೇಕಾಗಿದ್ದ ರಾಕಿಂಗ್ ಸ್ಟಾರ್ ಯಶ್ ಅವರು ಮೂವರು ಅಭಿಮಾನಿಗಳ ನಿಧನದಿಂದ ನೊಂದು, ಸೂತಕದ ಮನೆಗಳಲ್ಲಿ ಭಾವುಕರಾಗಬೇಕಾದ ಪ್ರಸಂಗ ಸೋಮವಾರ ಬಂದೊದಗಿತು.

Advertisement

ಯಶ್ ಅವರ ಫೋಟೋವಿದ್ದ ಜನ್ಮ ದಿನದ ಶುಭಾಶಯ ಕೋರುವ ಕಬ್ಬಿಣದ ರಾಡ್ ಗಳಿದ್ದ ಬೃಹತ್‌ ಕಟೌಟ್ ಗೆ ವಿದ್ಯುತ್ ತಂತಿ ತಗುಲಿ ಮೂವರು ಮೃತಪಟ್ಟ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿಗೆ ಸೋಮವಾರ ಸಂಜೆ ನಟ ಯಶ್ ಅವರು ದೌಡಾಯಿಸಿದರು. ಈ ವೇಳೆ ವ್ಯಾಪಕ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.

ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಪೊಲೀಸರ ಸಹಕಾರದೊಂದಿಗೆ ಗ್ರಾಮಕ್ಕೆ ಆಗಮಿಸಿದ ನಟ ಯಶ್, ಮೃತ ಮೂವರೂ ಅಭಿಮಾನಿಗಳ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ವೇಳೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುತ್ತಿಟ್ಟು. ಎಲ್ಲರ ಕಣ್ಣೀರು ಕಂಡು ಯಶ್ ಭಾವುಕರಾಗಿ ಮೌನರಾದರು.

ಗ್ರಾಮದ 10 ಕ್ಕೂ ಹೆಚ್ಚಿನ ಯುವಕರು ಯಶ್ ಜನ್ಮದಿನದ ಅಂಗವಾಗಿ ಕಟೌಟ್ ನಿಲ್ಲಿಸಲು ಮುಂದಾಗಿದ್ದ ವೇಳೆ ಹೈ ಟೆನ್ಷನ್‌ ವಿದ್ಯುತ್ ತಂತಿ ತಗುಲಿದ ಪರಿಣಾಮ ಸೂರಣಗಿ ಗ್ರಾಮದ ಹನುಮಂತ ಮಜ್ಜುರಪ್ಪ ಹರಿಜನ(21), ಮುರಳಿ ನೀಲಪ್ಪ ನಡವಿನಮನಿ(20), ನವೀನ ನೀಲಪ್ಪ ಗಾಜಿ(19) ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next