Advertisement

ಮಡಿಕೇರಿ: ಮರಗಳನ್ನು ಬೀಳಿಸಿ, ರೈಲ್ವೆ ಕಂಬಿಯ ಬೇಲಿಯನ್ನು ಜಖಂಗೊಳಿಸಿದ ಸಲಗ

03:05 PM Nov 03, 2021 | Team Udayavani |

ಮಡಿಕೇರಿ: ತ್ಯಾಗತ್ತೂರು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಬೆಳೆಗಾರ ಹಾಗೂ ಗ್ರಾ.ಪಂ ಸದಸ್ಯ ಮನುಮಹೇಶ್ ಅವರ ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಸಾಕಷ್ಟು ಹಾನಿ ಮಾಡಿದೆ.

Advertisement

ನೀಲಗಿರಿ ಮರಗಳನ್ನು ನೆಲಗುರುಳಿಸಿದೆ, ಕಾವೇರಿ ನದಿ ಬಳಿ ಆನೆಗಳ ದಾಳಿಯನ್ನು ತಡೆಯಲು ಅಳವಡಿಸಿರುವ ರೈಲ್ವೆ ಕಂಬಿಯ ಬೇಲಿಯನ್ನು ಜಖಂಗೊಳಿಸಿದೆ.

ತೋಟಕ್ಕೆ ಆಗಿರುವ ಹಾನಿಗೆ ಅರಣ್ಯ ಇಲಾಖೆ ಪರಿಹಾರ ನೀಡಬೇಕೆಂದು ಮನುಮಹೇಶ್ ಒತ್ತಾಯಿಸಿದ್ದಾರೆ. ರೈಲ್ವೆ ಕಂಬಿಗಳ ಬೇಲಿ ಆನೆಗಳನ್ನು ತಡೆಯುವಲ್ಲಿ ವಿಫಲವಾಗಿದ್ದು, ಸೋಲಾರ್ ಬೇಲಿಯನ್ನು ನಿರ್ಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹವಾಗುಣ ವೈಪರೀತ್ಯದೊಂದಿಗೆ ಕಾಡಾನೆಗಳ ಹಾವಳಿಯೂ ಮಿತಿ ಮೀರಿದ್ದು, ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next