Advertisement

ನಾಗರಹೊಳೆ : ರೈಲು ಕಂಬಿ ತಡೆಗೋಡೆಗೆ ಸಿಲುಕಿ ಗಂಡಾನೆ ದಾರುಣ ಸಾವು 

05:06 PM Dec 15, 2018 | Team Udayavani |

ಮೈಸೂರು: ಗ್ರಾಮಸ್ಥರು ಕಾಡಿಗೆ ಅಟ್ಟುತ್ತಿದ್ದ ವೇಳೆ ರೈಲು ಕಂಬಿ ತಡೆಗೋಡೆಗೆ ಸಿಲುಕಿಕೊಂಡು ಗಂಡಾನೆಯೊಂದು ದಾರುಣವಾಗಿ ಸಾವನ್ನಪ್ಪಿದ ಘಟನೆ ಹುಣಸೂರಿನ ವೀರನಹೊಸಹಳ್ಳಿ ಬಳಿ ನಡೆದಿದೆ.

Advertisement

ಮೂರು ಕಾಡಾನೆಗಳು ಗ್ರಾಮಕ್ಕೆ ಬಂದಿದ್ದು ಅರಣ್ಯ ಇಲಾಖೆ ಸಿಬಂದಿ ಮತ್ತು ಗ್ರಾಮಸ್ಥರು ಕಾಡಿಗೆ ಓಡಿಸಿದ್ದರು. ಆದರೆ 42 ವರ್ಷ ಪ್ರಾಯದ ಗಂಡಾನೆ ರೈಲು ಕಂಬಿ ತಡೆಗೊಡೆಗೆ ಹಾರಲು ಯತ್ನಿಸಿ ಸಿಲುಕಿ ದಾರುಣವಾಗಿ ಸಾವನ್ನಪ್ಪಿದೆ.

ಅನೆಯ ಹೃದಯ ಭಾಗ ಕಂಬಿಗೆ ಸಿಲುಕಿ ಭಾರ ತಾಳಲಾರದೆ ಶ್ವಾಸಕೋಶದ ಮೇಲೆ ಒತ್ತಡ ಬಿದ್ದು ಸಾವನ್ನಪ್ಪಿದೆ ಎಂದು  ಹೇಳಲಾಗಿದೆ.

ಮೃತ ಆನೆ ಪುಂಡಾನೆ ಎಂದು ಅರಣ್ಯ ಸಿಬಂದಿಗಳು ತಿಳಿಸಿದ್ದು, ಈ ಹಿಂದೆ ಕಾರ್ಯಾಚರಣೆ ನಡೆಸಿದ್ದಾಗ ತಪ್ಪಿಸಿಕೊಂಡಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next