Advertisement

ಆನೆ ದಂತ, ಜಿಂಕೆ ಕೊಂಬು ಸಾಗಿಸುತ್ತಿದ್ದ ಮೂವರ ಬಂಧನ

06:40 AM Jul 02, 2018 | |

ಕಡೂರು: ಆನೆದಂತ, ಚಿಪ್ಪುಹಂದಿಯ ಚಿಪ್ಪು, ಜಿಂಕೆ ಕೊಂಬುಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದ ತಂಡವನ್ನು ಭೇದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮೂವರನ್ನು ಬಂಧಿಸಿದ್ದಾರೆ. 

Advertisement

ತಾಲೂಕಿನ ಬೀರೂರು ರೈಲ್ವೆ ಗೇಟ್‌ ಸಮೀಪ ದಾಳಿ ನಡೆಸಿದ ಅಧಿಕಾರಿಗಳು ಕಾರು ಸಹಿತ ದಂತ, ಜಿಂಕೆ ಕೊಂಬುಗಳನ್ನು ವಶಪಡಿಸಿಕೊಂಡಿದ್ದಾರೆ.ಮೈಸೂರು ಮೂಲದ ಕಣ್ಣಪ್ಪ, ಸತೀಶ್‌ ಮತ್ತು ಸಂತೋಷ್‌ ಬಂಧಿತರಾಗಿದ್ದು, ಕುಡೂÉರು ಮತ್ತು ಕೊರಟಗೆರೆಯ ಇಬ್ಬರು ಹಾಗೂ ಮೋಹನ್‌ ಎಂಬಾತ ಪರಾರಿಯಾಗಿದ್ದಾರೆ.

ಕಾರಿನಲ್ಲಿದ್ದ ಸುಮಾರು ನಾಲ್ಕು ಕೆ.ಜಿ. ಆನೆದಂತ, 11 ಕೆ.ಜಿ. ಹಂದಿಯ ಚಿಪ್ಪು, 2 ಜಿಂಕೆ ಕೊಂಬು, 2 ಕಾಡುಕೋಣದ ಕೊಂಬುಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಕಾರ್ಯಾಚರಣೆ ವೇಳೆ ಮೂರು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೊಂದು ಪ್ರಾಣಿ ಚರ್ಮ ಸೇರಿ ಇತರ ಅಂಗಗಳನ್ನು ಕದ್ದು ಸಾಗಿಸುವ ದೊಡ್ಡ ಜಾಲವಿರಬಹುದು ಎಂದು ಶಂಕಿಸಲಾಗಿದೆ. ಕೇರಳ ಈ ಜಾಲದ ಮೂಲವಾಗಿದ್ದು, ಎಲ್ಲವನ್ನೂ ಅಲ್ಲಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
 

Advertisement

Udayavani is now on Telegram. Click here to join our channel and stay updated with the latest news.

Next