Advertisement

ಎಲಿಫೆಂಟ್‌ ಎನ್‌ಕೌಂಟರ್‌: ಕೊಲೆಗಡುಕ ಆನೆಗೆ ಸದ್ಗತಿ!

07:15 AM Aug 13, 2017 | |

ಸಾಹೀಬ್‌ಗಂಜ್‌: ಜಾರ್ಖಂಡ್‌, ಬಿಹಾರದ‌ 15 ಮಂದಿಯ ಸಾವಿಗೆ ಕಾರಣವಾಗಿದ್ದ ಆನೆಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. 

Advertisement

ಈ ಆನೆಯನ್ನು ಕೊಲ್ಲುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರವಿಡೀ ಹುಡುಕಾಟ ನಡೆಸಿತ್ತು. ಶಾರ್ಪ್‌ ಶೂಟರ್‌ ಸಫ್ರಾಜ್‌ ಖಾನ್‌ ಈ ಆನೆಗೆ ಗುಂಡಿಟ್ಟಿ ಕೊಂದಿದ್ದಾರೆ. ಕಾರ್ಯಾ ಚರಣೆ ವೇಳೆ ಮೊದಲಿಗೆ ಈ ಆನೆ ತಪ್ಪಿಸಿಕೊಂಡಿತಾದರೂ, ಮತ್ತೆ ಹುಡುಕಿ 428 ಕ್ಯಾಲಿಬರ್‌ ಮ್ಯಾಗಮ್‌ ರೈಫ‌ಲ್‌ನಿಂದ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. 

ಗುರುವಾರವೇ ಈ ಆನೆ ಹತ್ಯೆಯಾಗಿತ್ತು. ಆಗ ಸಫ್ರಾìಜ್‌ ಅರವಳಿಕೆ ಮದ್ದು ನೀಡುವ ಸಲುವಾಗಿ ಆನೆಯ ಕುತ್ತಿಗೆಗೆ ಗುರಿಯಾಗಿಸಿ ಶೂಟ್‌ ಮಾಡಿದ್ದರು. ಆದರೆ ಈ ಅರವಳಿಕೆ ಬುಲೆಟ್‌ ಆನೆಯ ಕುತ್ತಿಗೆಗೆ ತಗುಲಿತಾದರೂ, ಆನೆಗೆ ಏನೂ ಆಗಲಿಲ್ಲ. ಕಡೆಗೆ ಅದು ತಪ್ಪಿಸಿಕೊಂಡು ಹೋಗಿದೆ. ಶುಕ್ರವಾರ ಮತ್ತೆ ಅರಣ್ಯ ಸಿಬ್ಬಂದಿ ಜತೆಗೆ ಕಾರ್ಯಾಚರಣೆ ನಡೆಸಿ ಈ ಆನೆಯನ್ನು ಕೊಲ್ಲಲಾಗಿದೆ.

ಈ ಶಾರ್ಪ್‌ ಶೂಟರ್‌ ಈಗಾಗಲೇ 6 ಆನೆಗಳನ್ನು ಕೊಂದಿದ್ದು, ಇದು ಏಳನೇ ಆನೆ. ಅಲ್ಲದೆ ಐದು ಹುಲಿ ಮತ್ತು ಎಂಟು ಚಿರತೆಗಳನ್ನೂ ಇವರು ಕೊಂದಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಜನರ ಮೇಲೆ ದಾಳಿ ನಡೆಸುತ್ತಿದ್ದ ಈ ಎಲ್ಲಾ ಪ್ರಾಣಿಗಳನ್ನು ಕಾರ್ಯಾ ಚರಣೆ ಮೂಲಕವೇ ಇವರು ಕೊಂದಿದ್ದಾರೆ. ಮೃತಪಟ್ಟಿರುವ ಆನೆ 20-25 ವಯಸ್ಸಿ ನದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ. ಇದು ಜಾರ್ಖಂಡ್‌ನ‌ಲ್ಲಿ 11 ಮಂದಿ ಮತ್ತು ನೆರೆ ರಾಜ್ಯ ಬಿಹಾರದಲ್ಲಿ 4 ಮಂದಿಯನ್ನು ಹತ್ಯೆ ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next