Advertisement

ಶಿರಸಿ:ವಿದ್ಯುತ್‌ ಶಾಕ್‌ಗೆ ಹೆಣ್ಣಾನೆ ದಾರುಣ ಸಾವು 

10:39 AM Mar 06, 2018 | |

ಶಿರಸಿ: ಬನವಾಸಿ ವಲಯದ ಉಳ್ಳಾಲಕೊಪ್ಪದಲ್ಲಿ ಆನೆಯೊಂದು ಗಾಯಗೊಂಡು ಮೃತಪಟ್ಟ ಘಟನೆಯ ಬೆನ್ನಲ್ಲೇ ಇದೇ ವಲಯದ ಪಕ್ಕದಲ್ಲಿರುವ ಕಾಲೇಬೈಲು ಅರಣ್ಯ ವ್ಯಾಪ್ತಿಯಲ್ಲಿ ಇನ್ನೊಂದು ಆನೆ ಅಸಹಜವಾಗಿ ಮೃತಪಟ್ಟ ವರದಿಯಾಗಿದೆ.

Advertisement

ಮುಂಡಗೋಡ ಅರಣ್ಯ ವಲಯದ ಕಾಲೇಬೈಲು ಅರಣ್ಯದಲ್ಲಿ ಬೆಂಡೆ ಮರದ ಎಲೆ ತಿನ್ನಲು ಹೋದ ಹೆಣ್ಣಾನೆಗೆ ವಿದ್ಯುತ್‌ ತಂತಿ ತಗುಲಿ ಸಾವನ್ನಪ್ಪಿದೆ ಎನ್ನಲಾಗಿದೆ. 

ಈ ಆನೆ ಕಳೆದ ಐದಾರು ದಿನಗಳ ಹಿಂದೆಯೇ ಸಾವಾಗಿರಬೇಕು ಎಂಬ ಶಂಕೆ ಇದೆ. ಯಲ್ಲಾಪುರ ಉಪ ವಿಭಾಗದಲ್ಲಿ ನಡೆದಿದೆ ಎನ್ನಲಾಗಿದ್ದು, ಅರಣ್ಯಾಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಈ ನಡುವೆ ಕೆನರಾ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಎರಡನೇ ಆನೆ ಸಾವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next