Advertisement

ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆ

09:42 PM Dec 09, 2019 | keerthan |

ಚಿತ್ರದುರ್ಗ: ಕಳೆದೊಂದು ವಾರದಿಂದ ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗವನ್ನು ಕಡೆಗೂ ಸೆರೆ ಹಿಡಿಯಲಾಗಿದೆ.

Advertisement

ದಸರಾ ಆನೆ ಅಭಿಮನ್ಯು ನೇತೃತ್ವದ ಐದು ಆನೆಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು.

ಸಂಜೆ 4 ಗಂಟೆಗೆ ಪಶುವೈದ್ಯರು ಡಾಟಿಂಗ್ (ಅರವಳಿಕೆ) ನಡೆಸಿದರು. ನಂತರ ಪುನಶ್ಚೇತನ ಮದ್ದು ನೀಡಿ ಉಪಚರಿಸಿ ಆನೆ ಶಿಬಿರಕ್ಕೆ ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ.

ಬೆಳಗ್ಗೆ 8 ಗಂಟೆಗೆ ಆರಂಭವಾದ ಕಾರ್ಯಾಚರಣೆ ಸಂಜೆವರೆಗೆ ಸುಧೀರ್ಘವಾಗಿ ನಡೆಯಿತು.

ಬಳ್ಳಾರಿ ಸಿಸಿಎಫ್ ಲಿಂಗರಾಜ್, ಡಿಎಸಿಫ್ ಚಂದ್ರಶೇಖರ ನಾಯಕ ಸೇರಿದಂತೆ ವಾಚಾರ್ಸ್, ಟ್ರ್ಯಾಕರ್ಸ್ ಇತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next