Advertisement

ಆನೆ ದಾಳಿ: ಲಂಕಾ ಕ್ರೀಡಾಂಗಣದ ಇಬ್ಬರು ಕ್ರಿಕೆಟ್‌ ಸಿಬಂದಿ ಬಲಿ

09:30 PM Dec 09, 2021 | Team Udayavani |

ಕೊಲಂಬೊ: ಹಂಬಂತೋಟದಲ್ಲಿ “ಮಹಿಂದ ರಾಜಪಕ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನ’ದ ಇಬ್ಬರು ಸಿಬಂದಿ ಆನೆ ದಾಳಿಗೆ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಘಟನೆಯನ್ನು ಶ್ರೀಲಂಕಾ ಕ್ರಿಕೆಟ್‌ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಕ್ರೀಡಾಂಗಣದಿಂದ ಸುಮಾರು 500 ಮೀ. ದೂರದಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ.

Advertisement

ಲಂಕಾ ಪ್ರೀಮಿಯರ್‌ ಲೀಗ್‌ ಫೈನಲ್‌ಗಾಗಿ ಸಿಬಂದಿ ಮೈದಾನ ಸಿದ್ಧಗೊಳಿಸಿ ಬೈಕ್‌ ಮೂಲಕ ಮನೆಗೆ ಹಿಂದಿರುಗುವಾಗ ಈ ಘಟನೆ ಸಂಭವಿಸಿದೆ. ಒಬ್ಬರ ಶವ ಬೈಕ್‌ ಬಳಿಯೇ ಸಿಕ್ಕಿದ್ದು, ಮತ್ತೂಂದು ಸಮೀಪದ ಪೊದೆಯಲ್ಲಿ ಪತ್ತೆಯಾಗಿದೆ.

ಅಭಯಾರಣ್ಯ ಬಳಿ ಸ್ಟೇಡಿಯಂ:

ಮಹಿಂದ ರಾಜಪಕ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣವನ್ನು 2011ರಲ್ಲಿ ನಿರ್ಮಾಣ ಮಾಡಲಾಗಿತ್ತು. ಇದು ವನ್ಯಜೀವಿ ಅಭಯಾರಣ್ಯ ಹಾಗೂ ರಾಷ್ಟ್ರೀಯ ಉದ್ಯಾನವನದ ಸಮೀಪದಲ್ಲೇ ಇದ್ದು, ಹಲವು ಕಾಡುಪ್ರಾಣಿಗಳು ಸಂಚಾರ ನಡೆಸುತ್ತ ಇರುತ್ತವೆ ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next