Advertisement

ರಾಮನಗರದಲ್ಲಿ ಕುರಿಗಾಯಿಯ ಮೇಲೆ ಕಾಡಾನೆ ದಾಳಿ: ತೀವ್ರ ಗಾಯ

11:55 AM Jun 29, 2023 | Team Udayavani |

ರಾಮನಗರ: ಬೆಳ್ಳಂಬೆಳಗ್ಗೆ ಕುರಿಗಾಯಿಯ ಮೇಲೆ ಕಾಡಾನೆ ದಾಳಿ ನಡೆಸಿ ಗಂಭೀರ ಗಾಯಗೊಂಡಿರುವ ಘಟನೆ ಚನ್ನಪಟ್ಟಣ ತಾಲೂಕಿನ‌ ಗೊಲ್ಲರದೊಡ್ಡಿ ಬಳಿ ನಡೆದಿದೆ.

Advertisement

ರಾಮನಗರದ ಅಲೆಮರದದೊಡ್ಡಿಯ ನಿವಾಸಿ ಹಾಲಯ್ಯ ಅನೆ ದಾಳಿಯಿಂದ ಗಾಯಗೊಂಡಿರುವ ವ್ಯಕ್ತಿ.

ಕುರಿ ಮೇಯಿಸುತ್ತಿದ್ದ ಹಾಲಯ್ಯ ಇಂದು ಬೆಳಿಗ್ಗೆ 5.30ರ ನಸುಕಿನ‌ ಜಾವ ನಿತ್ಯಕ್ರಮ‌ಕ್ಕೆಂದು ತೆರಳಿದ್ದ ವೇಳೆ ದಾಳಿ ನಡೆಸಿದ್ದು, ಗಂಭಿರವಾಗಿ ಗಾಯಗೊಂಡಿರುವ ಹಾಲಯ್ಯನಿಗೆ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಗೆ ಕಳುಹಿಸಲಾಗಿದೆ.

ಇದನ್ನೂ ಓದಿ:ವಿವಿಧ ಧರ್ಮ- ಜಾತಿಗೆ ಸೇರಿದ್ದರೂ ನಾವೆಲ್ಲ ಮನುಷ್ಯರು: ಸಿಎಂ ಸಿದ್ದರಾಮಯ್ಯ

ಕಳೆದ ಒಂದು ತಿಂಗಳಲ್ಲಿ ಕಾಡಾನೆ ದಾಳಿಯಿಂದ ರಾಮನಗರ ಜಿಲ್ಲೆಯಲ್ಲಿ ಮೂರು ಮಂದಿ ಸಾವಿಗೀಡಾಗಿದ್ದು ಮೂವರು ಗಾಯಗೊಂಡಿದ್ದಾರೆ. ಎರಡು ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next