Advertisement

Manvi: ಜೆಸಿಬಿ ಸಾಗಿಸುವಾಗ ವಿದ್ಯುತ್ ಸ್ಪರ್ಶ: ಚಾಲಕ ಸಾವು

01:25 PM Feb 15, 2024 | Team Udayavani |

ಮಾನ್ವಿ (ರಾಯಚೂರು): ತಾಲೂಕಿನ ಯಡಿವಾಳ ಕ್ರಾಸ್ ಬಳಿ ಲಾರಿಯ ಮೇಲೆ ಜೆಸಿಬಿ ಸಾಗಿಸುವಾಗ 11 ಕೆ.ವಿ ವಿದ್ಯುತ್ ತಂತಿ ತಗುಲಿದ ಪರಿಣಾಮ ಶಾಕ್ ಹೊಡೆದು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

Advertisement

ಘಟನೆಯಲ್ಲಿ ಜಾರ್ಖಂಡ್ ಮೂಲದ ಅಜಯ್ ಮೃತಪಟ್ಟಿದ್ದಾನೆ. ವಿದ್ಯುತ್ ಶಾಕ್ ನಿಂದ ಬೆಂಕಿ ಹೊತ್ತಿಕೊಂಡು ಲಾರಿಯ ಟೈರ್ ಸುಟ್ಟು ಹೋಗಿವೆ.

ಘಟನೆ ಸ್ಥಳದಲ್ಲಿ ಸುತ್ತಮುತ್ತಲಿದ್ದ ರೈತರು ಕೂಡಲೇ ಅಗ್ನಿಶಾಮಕ ಇಲಾಖೆಗೆ ಮತ್ತು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next