Advertisement

ದೇಶದಲ್ಲಿ ಕೊನೆಗೊಳ್ಳುವುದು ಚುನಾವಣೆ ಅಲ್ಲ ವಂಶಾಧಿಕಾರ: BJP

12:54 AM Jan 31, 2024 | Team Udayavani |

ಹೊಸದಿಲ್ಲಿ: ಪ್ರಧಾನಿ ಮೋದಿ ಮತ್ತೂಂದು ಬಾರಿಗೆ ಆಯ್ಕೆಯಾದರೆ ದೇಶದಲ್ಲಿ ಚುನಾವಣೆಗಳು ಸ್ಥಗಿತಗೊಳ್ಳಲಿವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಹೊಸದಿಲ್ಲಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, “ದೇಶದಲ್ಲಿ ವಂಶಾಡಳಿತ ರಾಜಕಾರಣ ಕೊನೆಗೊಳ್ಳುತ್ತಿದೆ’ ಎಂದು ತಿರುಗೇಟು ನೀಡಿದ್ದಾರೆ.

Advertisement

ಜಮ್ಮು- ಕಾಶ್ಮೀರದಲ್ಲಿ ಅಬ್ದುಲ್ಲಾ ಹಾಗೂ ಮುಫ್ತಿ, ಹರಿಯಾಣದಲ್ಲಿ ಹೂಡಾ, ರಾಜಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ ಪುತ್ರ, ಉ.ಪ್ರ.ದಲ್ಲಿ ಅಖೀಲೇಶ್‌ ಯಾದವ್‌ ಪತ್ನಿ, ಬಿಹಾರದಲ್ಲಿ ಲಾಲು ಪ್ರಸಾದ್‌ ಯಾದವ್‌ ಕುಟುಂಬ ಪ್ರಭಾವಶಾಲಿಯಾಗಿತ್ತು. ಅಂಥ ವ್ಯವಸ್ಥೆ ಕುಸಿಯುತ್ತಿದೆ. ಎಐಸಿಸಿ ಅಧ್ಯಕ್ಷರು ವೃಥಾರೋಪ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಂಶಾಡಳಿತ ರಾಜಕಾರಣ ಕೊನೆಗೊಳ್ಳುತ್ತಿದೆ. ನಿಜವಾದ ಪ್ರಜಾಪ್ರಭುತ್ವ ಹೊರ ಹೊಮ್ಮಲಿದೆ’ ಎಂದರು. ಮುಂದಿನ ಚುನಾವಣೆ ಫ‌ಲಿತಾಂಶ ನಿರೀಕ್ಷಿಸಿ ರಾಜವಂಶದಂತೆ ಇರುವ (ಕಾಂಗ್ರೆಸ್‌) ವ್ಯವಸ್ಥೆ ಥರಗುಟ್ಟಿ ಹೋಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next