Advertisement

ಜುಲೈ 31ರಂದು ನೂತನ ಸ್ಪೀಕರ್ ನೇಮಕಕ್ಕೆ ಚುನಾವಣೆ; ಡೆಪ್ಯುಟಿ ಸ್ಪೀಕರ್ ಘೋಷಣೆ

08:33 AM Jul 30, 2019 | Nagendra Trasi |

ಬೆಂಗಳೂರು: ಬಿಎಸ್ ಯಡಿಯೂರಪ್ಪ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಿದ ಬೆನ್ನಲ್ಲೇ ಕೆಆರ್ ರಮೇಶ್ ಕುಮಾರ್ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಜುಲೈ 31ರಂದು ಸ್ಪೀಕರ್ ಆಯ್ಕೆ ಚುನಾವಣೆ ನಡೆಯಲಿದೆ ಎಂದು ಡೆಪ್ಯುಟಿ ಸ್ಪೀಕರ್ ಕೃಷ್ಣಾ ರೆಡ್ಡಿ ಘೋಷಿಸಿದ್ದಾರೆ.

Advertisement

ನಾಳೆ ಮಧ್ಯಾಹ್ನದೊಳಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ವಿಧಾನಸಭಾ ಕಾರ್ಯದರ್ಶಿಗೆ ನಾಮಪತ್ರ ಸಲ್ಲಿಸಬಹುದು ಎಂದು ಕೃಷ್ಣಾ ರೆಡ್ಡಿ ಈ ಸಂದರ್ಭದಲ್ಲಿ ತಿಳಿಸಿದರು.

ಸಂಜೆ 5ಗಂಟೆಗೆ ಮತ್ತೆ ವಿಧಾನಸಭಾ ಕಲಾಪ ಆರಂಭವಾದಾಗ, ಜುಲೈ 31ರಂದು ನೂತನ ಸ್ಪೀಕರ್ ಆಯ್ಕೆಗಾಗಿ ಚುನಾವಣೆ ನಡೆಯಲಿದೆ ಎಂದು ಘೋಷಿಸಿದ ಕೃಷ್ಣಾ ರೆಡ್ಡಿ, ಕಲಾಪವನ್ನು ಬುಧವಾರ 11ಗಂಟೆಗೆ ಮುಂದೂಡಿದರು.

Advertisement

Udayavani is now on Telegram. Click here to join our channel and stay updated with the latest news.

Next