Advertisement

ಚುನಾವಣಾ ರಾಜಕಾರಣ ಸಾಕು ಅನ್ನಿಸಿದೆ;ದಲಿತ ಸಿಎಂ ಆದ್ರೆ ತಕರಾರಿಲ್ಲ!

11:37 AM May 13, 2018 | Team Udayavani |

ಮೈಸೂರು:ಮತದಾನ ನಡೆದು ಫ‌ಲಿತಾಂಶಕ್ಕಾಗಿ ಎದುರು ನೋಡುತ್ತಿರುವ ವೇಳೆ  ‘ನನಗೆ ಚುನಾವಣಾ ರಾಜಕೀಯ ಸಾಕು ಅನ್ನಿಸಿದೆ. ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

Advertisement

ಭಾನುವಾರ ಮೈಸೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ‘ನಾನು ಕಳೆದ ಬಾರಿಯೇ ಚುನಾವಣೆಗೆ ಸ್ಫರ್ಧಿಸಬಾರದು ಎಂದು ಮಾನಸಿಕವಾಗಿ ನಿರ್ಧಾರ ತಳೆದಿದ್ದೆ . ಆದರೆ ಮುಖ್ಯಮಂತ್ರಿಯಾಗಿ ಪಲಾಯನವಾದ ಮಾಡಬಾರದು ಎಂದು ಮತ್ತೆ ಸ್ಫರ್ಧಿಸಿದೆ’ ಎಂದರು. 

‘ನನ್ನ ಕೊನೆಯ ವರೆಗೆ ಕೋಮುವಾದಿಗಳು, ಜಾತಿವಾದಿಗಳ ವಿರುದ್ದ ಹೋರಾಟ ಮುಂದುವರಿಸುತ್ತೇನೆ’ ಎಂದರು. 

‘ನನಗೆ ರಾಷ್ಟ್ರ ರಾಜಕಾರಣದಲ್ಲಿ  ಆಸಕ್ತಿಯಿಲ್ಲ. ಕರ್ನಾಟಕ್ಕೆ ಮಾತ್ರ ನನ್ನ ರಾಜಕೀಯ ಸೀಮಿತ. ದೆಹಲಿ ಕಡೆ ತಲೆನೇ ಹಾಕುವುದಿಲ್ಲ’ ಎಂದರು. 

ದಲಿತ ಸಿಎಂ ಓಕೆ !

Advertisement

‘ನಾವು 120 ಕ್ಕೂ ಹೆಚ್ಚು ಸ್ಥಾನಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂದು  ನನಗೆ ಖಚಿತ ವಿಶ್ವಾಸವಿದೆ . ದುಡ್ಡಿನಿಂದಲೇ ಎಲ್ಲಾ ಗೆಲ್ಲುವುದಕ್ಕೆ ಸಾಧ್ಯವಿಲ್ಲ’ ಎಂದರು.
 
‘ಹೈಕಮಾಂಡ್‌ ದಲಿತ ಸಿಎಂ ಮಾಡಬೇಕು ಅಂದರೆ ನನ್ನದೇನು ತಕರಾರು ಇಲ್ಲ. ನಾನು ಯಾರ ವಿರುದ್ಧವೂ ಇಲ್ಲ’ ಎಂದರು. 

ನಾನು ಮುಖ್ಯಮಂತ್ರಿಯಾಗಿ 5 ವರ್ಷ ಪೂರೈಸಿದ್ದೇನೆ.ಅಧಿಕಾರ ನಡೆಸಲು ಸಹಕರಿಸಿದ ಶಾಸಕರು ಅಧಿಕಾರಿಗಳು , ರಾಜ್ಯದ ಜನರಿಗೆ ಧನ್ಯವಾದಗಳು ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next