Advertisement

ಇಂದು ನಿರ್ಮಾಪಕರ ಸಂಘದ ಚುನಾವಣೆ

10:00 AM Dec 30, 2019 | Lakshmi GovindaRaj |

ಇಂದು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ ರಾಜೇಂದ್ರ ಸಿಂಗ್‌ ಬಾಬು ಮತ್ತು ರಾಮಕೃಷ್ಣ ಡಿ.ಕೆ. (ಪ್ರವೀಣ್‌ಕುಮಾರ್‌) ಸ್ಪರ್ಧೆಗಿಳಿದಿದ್ದಾರೆ. ಇಬ್ಬರ ನಡುವೆ ಭರ್ಜರಿ ಸ್ಪರ್ಧೆ ಏರ್ಪಟ್ಟಿದ್ದು, ಯಾರು ನಿರ್ಮಾಪಕರ ಸಂಘದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕು. ಆರಂಭದಲ್ಲಿ ನಿರ್ಮಾಪಕ ಮುನಿರತ್ನ ಅವರು ಸ್ಪರ್ಧಿಸಲು ಮುಂದಾಗಿದ್ದರು.

Advertisement

ಆದರೆ, ರಾಜಕೀಯ ಸೇರಿದಂತೆ ಹಲವು ಕಾರ್ಯಗಳಲ್ಲಿ ಬಿಝಿಯಾಗಿರುವುದರಿಂದ ಮುನಿರತ್ನ ಅವರು ನಿರ್ಮಾಪಕರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಹಾಗಾಗಿ, ರಾಜೇಂದ್ರ ಸಿಂಗ್‌ ಬಾಬು ಹಾಗೂ ರಾಮಕೃಷ್ಣ ಅವರ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಇನ್ನು, ಉಪಾಧ್ಯಕ್ಷ ಸ್ಥಾನಕ್ಕೆ ದಿನೇಶ ಎಸ್‌, (ದಿನೇಶ್‌ ಗಾಂಧಿ, ರಾಮಮೂರ್ತಿ, ಎಂ.ಜಿ. ಮತ್ತು ಶ್ರೀನಿವಾಸ್‌ ಹೆಚ್‌.ಸಿ.(ಶಿಲ್ಪ) ಇವರುಗಳು ಸ್ಪರ್ಧಿಸಿದ್ದಾರೆ. ಗೌರವ ಕಾರ್ಯ ದರ್ಶಿ ಸ್ಥಾನಕ್ಕೆ ಕೇಶವ ಬಿ.ಆರ್‌ ಹಾಗು ಕೆ.ಮಂಜು ನಡುವೆ ಸ್ಪರ್ಧೆ ನಡೆಸಯಲಿದೆ.

ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ರಮೇಶ್‌ ಯಾದವ್‌ ಎಂ. ಅವರು ಒಬ್ಬರೇ ಕಣದಲ್ಲಿರು ವುದರಿಂದ ಅವರನ್ನು ಅವಿರೋಧ ಆಯ್ಕೆ ಮಾಡಲಾಗಿದೆ. ಹಾಗೆಯೇ ಖಜಾಂಚಿ ಸ್ಥಾನಕ್ಕೂ ಆರ್‌.ಎಸ್‌.ಗೌಡ ಅವರೊಬ್ಬರೇ ಕಣದಲ್ಲಿರುವುದರಿಂದ ಅವರನ್ನು ಅವಿರೋಧ ಆಯ್ಕೆ ಮಾಡಲಾಗಿದೆ. 2011ರ ಬಳಿಕ ಇಲ್ಲಿವರೆಗೆ ನಿರ್ಮಾಪಕರ ಸಂಘಕ್ಕೆ ಚುನಾವಣೆ ನಡೆದಿರಲಿಲ್ಲ. ಎರಡು ವರ್ಷಕ್ಕೊಮ್ಮೆ ನಡೆಯಬೇಕಿದ್ದ ಚುನಾವಣೆ ಎಂಟು ವರ್ಷದ ಬಳಿಕ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next