Advertisement

ಚುನಾವಣ ಮಾರ್ಗದರ್ಶಿ ಕೈಪಿಡಿ ಬಿಡುಗಡೆ

09:44 PM Apr 09, 2019 | mahesh |

ಬೆಳ್ತಂಗಡಿ: ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್‌
ಡಾ| ಮುರಳಿಮೋಹನ್‌ ಚೂಂತಾರು ಅವರು ಬೆಳ್ತಂಗಡಿ ಗೃಹರಕ್ಷಕ ಘಟಕಕ್ಕೆ ಭೇಟಿ ನೀಡಿ ಚುನಾವಣ ಪೂರ್ವ ತಯಾರಿ ಸಂಬಂಧವಾಗಿ ಗೃಹರಕ್ಷಕರಿಗೆ ಚುನಾವಣ ಮಾರ್ಗದರ್ಶಿ ಎಂಬ ಕೈಪಿಡಿಯನ್ನು ಲೋಕಾರ್ಪಣೆಗೊಳಿಸಿದರು.

Advertisement

ಚುನಾವಣಾ ಸಂದರ್ಭ ಯಾವ ರೀತಿ ವ್ಯವಹರಿಸಬೇಕು, ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಿದರು. ಕೈಪಿಡಿಯಲ್ಲಿ ಚುನಾವಣ ಸಂದರ್ಭ ಗೃಹರಕ್ಷಕರ ಜವಾಬ್ದಾರಿ, ಮಾಡುವಿಕೆ- ಮಾಡದಿರುವ ಕುರಿತು ಪರಿಪೂರ್ಣ ಮಾಹಿತಿ ನೀಡಲಾಗಿದೆ.

ಎಲ್ಲ ಗೃಹರಕ್ಷಕರು ಚುನಾವಣೆ ಸಂದರ್ಭದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ಶಾಂತಿಯುತ ಮತ್ತು ನ್ಯಾಯಯುತವಾದ ಮತದಾನ ನಡೆಯುವ ಪ್ರಕ್ರಿಯೆಯಲ್ಲಿ ಪೊಲೀಸ ರೊಂದಿಗೆ ಸಹಕರಿಸಬೇಕೆಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ಜಯಾನಂದ ಲಾೖಲ, ಹಿರಿಯ ಗೃಹರಕ್ಷಕರಾದ ಅಪ್ಪು, ಬಾಬು, ಚಾಕೋ, ಡೆನ್ನಿಸ್‌ ಹಾಗೂ 55 ಮಂದಿ ಗೃಹರಕ್ಷಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next