Advertisement

Election: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ V/s ಕಾಂಗ್ರೆಸ್‌

11:34 PM Oct 24, 2023 | Team Udayavani |

ಮಧ್ಯಪ್ರದೇಶದಲ್ಲಿ ಟಿಕೆಟ್‌ ಕಚ್ಚಾಟ ಎಷ್ಟರ­ಮಟ್ಟಿಗೆ ತೀವ್ರಗೊಂಡಿದೆ ಎಂದರೆ ಕಾಂಗ್ರೆಸ್‌ನವರನ್ನು ಕಂಡರೆ ಕಾಂಗ್ರೆಸ್‌ನವರೇ ಉರಿದು­ಬೀಳುತ್ತಿದ್ದಾರೆ. ಇದು ರಾಜ್ಯ ವಿಧಾನಸಭೆ ಚುನಾ ವಣೆಯಲ್ಲಿ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಬಹುದು ಎಂಬ ಶಂಕೆಯನ್ನು ಮೂಡಿಸಿದೆ.

Advertisement

ಒಬಿಸಿ ಸಮುದಾಯ­ಗಳಿಗೆ ಟಿಕೆಟ್‌ ಹಂಚಿಕೆಯಲ್ಲಿ ಆದ್ಯತೆ ನೀಡಿಲ್ಲ ಎನ್ನುವುದು ಕಾಂಗ್ರೆಸ್‌ನ ರಾಜ್ಯ ಉಪಾಧ್ಯಕ್ಷ ದಾಮೋದರ್‌ ಸಿಂಗ್‌ ಆರೋಪ. ಈ ಸಿಟ್ಟಿನಿಂದ ಅವರು ದಸರಾ ದಿನವೇ ಕಾಂಗ್ರೆಸ್‌ ಮಾಜಿ ಸಿಎಂ ದಿಗ್ವಿಜಯ್‌ಸಿಂಗ್‌ ಮತ್ತು ಪುತ್ರ ಜೈವರ್ಧನ್‌ ಸಿಂಗ್‌ ಪ್ರತಿಕೃತಿಗಳನ್ನು ದಹಿಸಿದ್ದಾರೆ. ಅಪ್ಪ-ಮಗ ಸೇರಿ ಕಾಂಗ್ರೆಸ್‌ಅನ್ನು ಸುಡುತ್ತಿದ್ದಾರೆ ಅದಕ್ಕೆ ನಾನು ಪ್ರತಿಕೃತಿ ಸುಡುತ್ತಿದ್ದೇನೆ ಎಂದಿದ್ದಾರೆ. ಜತೆಗೆ 15 ಕ್ಷೇತ್ರಗಳಲ್ಲಿ ತಾವೇ ಸ್ವತಂತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸು­ವುದಾಗಿಯೂ ಘೋಷಿಸಿದ್ದಾರೆ. ಈ ಆಕ್ರೋಶದ ಬೆಂಕಿ ಚುನಾವಣೆಯ ವೇಳೆ ಕಾಂಗ್ರೆ ಸ್‌ಗೆ ಬಿಸಿ ಮುಟ್ಟಿಸುವ ಸಾಧ್ಯತೆಯೂ ಇಲ್ಲದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next