Advertisement

ಚುನಾವಣಾ ಆಯೋಗ ಹಲ್ಲಿಲ್ಲದ ಹುಲಿ: ವರುಣ್‌ ಗಾಂಧಿ ಕಿಡಿ

10:49 AM Oct 14, 2017 | Team Udayavani |

ಹೈದರಾಬಾದ್‌ : ”ಚುನಾವಣಾ ಆಯೋಗವು ಹಲ್ಲಿಲ್ಲದ ಹುಲಿ” ಎಂದು ಬಿಜೆಪಿ ಸಂಸದ ವರುಣ್‌ ಗಾಂಧಿ ಕಿಡಿ ಕಾರಿದ್ದಾರೆ.

Advertisement

‘ನಿಗದಿತ ಸಮಯದೊಳಗೆ ಚುನಾವಣಾ ಖರ್ಚು ವೆಚ್ಚಗಳ ವಿವರಗಳನ್ನು ಸಲ್ಲಿಸದಿರುವ ಯಾವೊಂದು ರಾಜಕೀಯ ಪಕ್ಷವನ್ನು ಕೂಡ ಚುನಾವಣಾ ಆಯೊಗ ಅಮಾನ್ಯಗೊಳಿಸಿಲ್ಲ’ ಎಂದವರು ಗುಡುಗಿದ್ದಾರೆ.

‘ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ ಭಾರೀ ಪ್ರಮಾಣದ ಹಣವನ್ನು ಖರ್ಚು ಮಾಡುತ್ತವೆ; ಹಾಗಾಗಿ ಧನಬಲ ಇಲ್ಲದ ಸಾಮಾನ್ಯ ವರ್ಗದ ಜನರಿಗೆ ಚುನಾವಣೆಲ್ಲಿ ಸ್ಪರ್ಧಿಸುವುದು ಕನಸಿನ ಮಾತಾಗಿದೆ’ ಎಂದು ವರುಣ್‌ ಹೇಳಿದರು. 

ಚುನಾವಣಾ ಆಯೋಗ ಎರಡು ದಿನಗಳ ಹಿಮಾಚಲ ಪ್ರದೇಶ ವಿಧಾನಸಭಾ ಚುನವಾಣಾ ದಿನಾಂಕವನ್ನು ಪ್ರಕಟಿಸುವಾಗ ಗುಜರಾತ್‌ ದಿನಾಂಕ ಪ್ರಕಟಿಸದಿರುವುದನ್ನು ಬಲವಾಗಿ ಟೀಕಿಸಿರುವ ವಿರೋಧ ಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್‌, ಬಿಜೆಪಿಯು ಚುನಾವಣಾ ಆಯೋಗದ ಮೇಲೆ ಒತ್ತಡ ಹೇರುವ ತಂತ್ರವನ್ನು ಅನಸರಿಸುತ್ತಿದೆ ಎಂದು ದೂರಿದ್ದವು. ಆ ಹಿನ್ನೆಲೆಯಲ್ಲಿ ವರುಣ್‌ ಗಾಂಧಿ ಅವರಿಂದ ಈ ಪ್ರತಿಕ್ರಿಯೆ ವ್ಯಕತವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next