Advertisement

ವಿಜಯೋತ್ಸವಕ್ಕೆ ನಿಷೇಧ : ಕೋವಿಡ್ ಹಿನ್ನೆಲೆ ಚುನಾವಣಾ ಆಯೋಗದಿಂದ ಮಹತ್ವದ ನಿರ್ಧಾರ

01:35 AM Apr 28, 2021 | Team Udayavani |

ಹೊಸದಿಲ್ಲಿ : ಚುನಾವಣ ರ‍್ಯಾಲಿ, ರೋಡ್‌ ಶೋಗಳು ದೇಶದಲ್ಲಿ ಕೊರೊನಾ ಪ್ರಸರಣ ಹೆಚ್ಚಿಸಿವೆ ಎಂಬ ಆರೋಪದ ಬೆನ್ನಲ್ಲೇ ಕೇಂದ್ರ ಚುನಾವಣ ಆಯೋಗವು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮೇ 2ರ ಚುನಾವಣ ಫ‌ಲಿತಾಂಶ ದಿನದಂದು ರಾಜಕೀಯ ಪಕ್ಷಗಳ ವಿಜಯೋತ್ಸವಕ್ಕೆ ನಿಷೇಧ ಹೇರಿದೆ.

Advertisement

ಫ‌ಲಿತಾಂಶದ ಬಳಿಕ ವಿಜೇತ ಅಭ್ಯರ್ಥಿಯ ಜತೆಗೆ ಇಬ್ಬರಿಗಿಂತ ಹೆಚ್ಚು ಮಂದಿ ಇರಲು ಅನುಮತಿ ಇಲ್ಲ. ಅಭ್ಯರ್ಥಿಯ ಅಧಿಕೃತ ಪ್ರತಿನಿಧಿ ಚುನಾವಣ ಪ್ರಮಾಣಪತ್ರ ಪಡೆಯಬೇಕು ಎಂದು ಆಯೋಗ ಸೂಚಿಸಿದೆ. ಮೇ 2ರಂದು ಕೇರಳ, ತಮಿಳುನಾಡು, ಪುದುಚೆರಿ, ಪ. ಬಂಗಾಲ, ಅಸ್ಸಾಂನ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫ‌ಲಿತಾಂಶ ಹೊರಬೀಳಲಿದೆ.

ಬಿಜೆಪಿ ಸ್ವಾಗತ
ಈ ನಿರ್ಧಾರವನ್ನು ಬಿಜೆಪಿ ಸ್ವಾಗತಿಸಿದೆ. ವಿಜಯೋ ತ್ಸವ ಮತ್ತು ಸಂಭ್ರಮಾಚರಣೆಗಳಿಗೆ ಆಯೋಗ ನಿಷೇಧ ವಿಧಿಸಿರುವುದನ್ನು ಸ್ವಾಗತಿಸುತ್ತೇನೆ ಎಂದು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next