Advertisement

Election 2023: ಹೀಗೂ ಉಂಟು-ಒಂದೇ ಕ್ಷೇತ್ರದ ಮೂವರು ಸಂಸದರು !

12:00 AM Apr 10, 2023 | Team Udayavani |

ಪುತ್ತೂರು: ಪರಿಶಿಷ್ಟ ಜಾತಿ ಮೀಸಲಾತಿಗೆ ಒಳಪಟ್ಟಿರುವ ಸುಳ್ಯ ವಿಧಾನಸಭಾ ಕ್ಷೇತ್ರವು ಮೂವರು ಸಂಸದರನ್ನು ಹೊಂದಿರುವುದು ವಿಶೇಷ..!
ಸುಳ್ಯದ ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯವರಿಗೆ ಮಾತ್ರ ಸ್ಪರ್ಧೆಗೆ ಅವ ಕಾಶ ಇದೆ. ಇಲ್ಲಿ ಉಳಿದ ಸಮುದಾಯವರಿಗೆ ಅವಕಾಶ ಇಲ್ಲ.

Advertisement

ಆದರೆ ಉಳಿದ ಸಮು ದಾಯವರು ಸುಳ್ಯದಿಂದ ಹೊರ ಕ್ಷೇತ್ರದಲ್ಲಿ ಭರಪೂರ ಅವಕಾಶ ಪಡೆದಿದ್ದಾರೆ. ಶಾಸಕ, ಸಂಸದ, ಸಚಿವ, ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿ, ಕೇಂದ್ರ ಸಚಿವ ಹೀಗೆ ಹತ್ತಾರು ಸ್ಥಾನಗಳನ್ನು ಅಲಂಕರಿಸಿದ್ದಾರೆ. ಪ್ರಸ್ತುತ ಇದೇ ಕ್ಷೇತ್ರಕ್ಕೆ ಸೇರಿರುವ ಮೂವರು ರಾಜ್ಯದ ಮೂರು ಕ್ಷೇತ್ರಗಳಲ್ಲಿ ಸಂಸದರಾಗಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಮಂಡೆಕೋಲಿನ ಡಿ.ವಿ. ಸದಾನಂದ ಗೌಡ ಬೆಂಗಳೂರು ಉತ್ತರ ಕ್ಷೇತ್ರ, ಚಾರ್ವಾಕದ ಶೋಭಾ ಕರಂದ್ಲಾಜೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರ, ಪಾಲ್ತಾಡಿ ಗ್ರಾಮದ ಕುಂಜಾ ಡಿಯ ನಳಿನ್‌ ಕುಮಾರ್‌ ಕಟೀಲು ದ.ಕ. ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next